ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಪರೀತ ಮಳೆಯಿಂದ ಅನೇಕ ಮನೆಯೊಳಗೆ ನೀರು ತುಂಬಿದ್ದು ಮರಗಳು ವಿದ್ಯುತ್ ಕಂಬಗಳು ಉರುಳಿದ್ದು ಈ ಪ್ರದೇಶಗಳಿಗೆ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರು ಭೇಟಿ ನೀಡಿದ್ದು, ಶಕ್ತಿನಗರ ಪ್ರದೇಶದಲ್ಲಿ ಶ್ರೀಮತಿ ರಾಜೀವಿ ಶೆಟ್ಟಿಯವರ ಮನೆಗೆ ತೀವ್ರವಾದ ಹಾನಿ ಉಂಟಾಗಿದ್ದು, ಗೋಡೆ ಕುಸಿದಿದ್ದು   ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕರು ತಹಶೀಲ್ದಾರರಿಗೆ ಹಾಗೂ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಪರಿಹಾರವನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಹಾಗೂ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.


ಅನೇಕ ಕಡೆಗಳಲ್ಲಿ ಹವಮಾನ ವೈಪರೀತ್ಯದಿಂದ ಮಳೆ ಗಾಳಿಯಿಂದ ಸಣ್ಣ ಪುಟ್ಟ ತೊಂದರೆಗಳನ್ನು ನಿವಾರಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕರಾವಳಿ ಜಿಲ್ಲೆಯಲ್ಲಿ ಉಂಟಾದ ಅನಾಹುತದ ಬಗ್ಗೆ ನಷ್ಟದ ಬಗ್ಗೆ ಅಪರ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಕೂಡಲೇ ಸರ್ಕಾರದ ಗಮನಕ್ಕೆ ತರುವಂತೆ ವಿನಂತಿಸಿದರು.

ಭೇಟಿ ನೀಡಿದ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಶವಂತ ಪ್ರಭು, ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಜೋಗಿ, ವಾರ್ಡ್ ಅಧ್ಯಕ್ಷರಾದ ದಯಾನಂದ್, ಬೂತ್  ಅಧ್ಯಕ್ಷರಾದ ಸ್ಟ್ಯಾನಿ ಶಕ್ರಿನಗರ, ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಅವ್ಲಾನ್ ಕ್ಯಾಸ್ಟಲಿನೋ ಮುಂತಾದವರು ಜೊತೆಗಿದ್ದರು.