ಬೆಂಗಳೂರಿನ ಬ್ಯಾಡರಹಳ್ಳಿ ಪೋಲೀಸು ಠಾಣೆ ವ್ಯಾಪ್ತಿಯಲ್ಲಿ  ಕುಟುಂಬ ಕಲಹದ ಕಾರಣ ಪತ್ರಕರ್ತರೊಬ್ಬರ ಕುಟುಂಬದ 4 ಜನ 9 ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ರಕರ್ತ ಹಲ್ಲೆಗೆರೆ ಶಂಕರ್ ಊರಿನಲ್ಲಿ ಇಲ್ಲದ ಸಮಯದಲ್ಲಿ ಈ ದುರಂತ ನಡೆದಿದೆ. ನೆರೆಹೊರೆಯಲ್ಲಿ ಕೊಳೆತ ವಾಸನೆ ಬಂದಾಗ ಪೋಲೀಸರಿಗೆ ದೂರು ಹೋಯಿತು. ಅವರು ಬಂದು ಬಾಗಿಲು ಒಡೆದು ನೋಡಿದಾಗ ಅರೆಬರೆ ಕೊಳೆತ ಶವಗಳು ಪತ್ತೆಯಾಗಿವೆ. ಒಂದು 3 ವರುಷದ ಮಗು ಆಹಾರವಿಲ್ಲದೆ ಸ್ಮೃತಿ ತಪ್ಪಿ ಬಿದ್ದಿತ್ತು, ಅದೀಗ ಬಚಾವಾಗಿದೆ.

50ರ ಭಾರತಿ, 33ರ ಸಿಂಚನಾ, 30ರ ಸಿಂಧುರಾಣಿ, 27ರ ಮಧುಸಾಗರ್ ತಾಕೊಲೆ ಮಾಡಿಕೊಂಡವರು.