ಕಾರ್ಕಳ, ಮೇ 1: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಇಂದು ಕಾರ್ಕಳದಲ್ಲಿ ಮೇ 1 ಅಂತರ್ ರಾಷ್ಟೀಯ ಕಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಸಭೆಯನ್ನು ಉದ್ಘಾಟಿಸಿ ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಮಾತಾನಾಡಿದರು. ಕಾರ್ಕಳ ಸಿಐಟಿಯು ಮುಖಂಡರಾದ ನಾಗೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ ,ಬೀಡಿ  ಕಾರ್ಕಳ ತಾಲೂಕು ಬೀಡಿ ಸಂಘದ ಮುಖಂಡರಾದ ಜಾನಕಿ, ಲಕ್ಷೀ, ವಸಂತಿ, ಗೀತಾ, ಪ್ರೇಮ, ಸುಮಿತ್ರಾ, ನಿಟ್ಟೆ ಲೆಮಿನಾ ಯೂನಿಯನ್ ಅಧ್ಯಕ್ಷ ರಾದ ಮೋಹನ್ ಚಂದ್ರ ,ಉಪಾಧ್ಯಕ್ಷ ರಾದ ಸುಧಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಾಗೇಶ್, ಕಾರ್ಕಳ ಕಟ್ಟಡ ಸಂಘದ ಅಧ್ಯಕ್ಷರಾಅದ ಶೇಖರ್ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ರಾದ ರತ್ನಕರ್ ಪೂಜಾರಿ, ಮುದ್ರಾಡಿ,ಮುಖಂಡರಾದ ಹರೀಶ್ ದೇವಾಡಿಗ,ಕಾರ್ಕಳ ತಾಲೂಕು ಸಿಐಟಿಯು ಸಂಚಾಲನ ಸಮಿತಿ ಸದಸ್ಯರಾದ ಹರೀಶ್ ಪೂಜಾರಿ, ಉಪಸ್ಥಿತರಿದ್ದರು.

ಕೊನೆಯಲ್ಲಿ ಸಿಐಟಿಯು ಕಾರ್ಕಳ ಸಮಿತಿಯ ಸದಸ್ಯರಾಅದ ನಾಗೇಶ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.