ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಾರಿತ್ರಿಕ ಚಿತ್ರದ ಶೂಟಿಂಗ್ ವೇಳೆ ಕುದುರೆ ಒಂದು ಸತ್ತಿದ್ದು‌, ಹೈದರಾಬಾದ್‌ನ ಕುದುರೆ ಮಾಲಿಕ ನೀಡಿರುವ ದೂರಿನ ಮೇಲೆ ಮಣಿರತ್ನಂ ಮೇಲೆ ಎಫ್‌ಐಆರ್- ಪ್ರಥಮ ಮಾಹಿತಿ ವರದಿ ದಾಖಲಾಗಿದೆ.

ಆಗಸ್ಟ್‌ನಲ್ಲೇ ಇದು ನಡೆದಿದ್ದರೂ ಈಗ ಪೇಟಾ ಮತ್ತು ಎಡಬ್ಲ್ಯುಬಿಐ- ಎನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ ಪ್ರಕರಣ ಕೈಗೆತ್ತಿಕೊಂಡಿರುವುದರಿಂದ ಮೊಕದ್ದಮೆ ಬಿಗಿಗೊಂಡಿದೆ.

ಬಿಸಿಲಿನಲ್ಲಿ ಒಂದೇ ಸಮನೆ ಕುದುರೆ ಬಳಸಿದ್ದರಿಂದ ದೇಹದ ನೀರು ಒಣಗಿ ಕುದುರೆ ಸತ್ತಿದೆ. ಇದು ಅಕ್ಷಮ್ಯ ಅಪರಾಧ ಎಂಬುದು ಪೇಟಾ ಪ್ರಾಣಿಗಾಗಿ‌ ಜನರ ಸಂಸ್ಥೆಯ ದೂರು.

ಚೋಳ ರಾಜಸತ್ತೆಗೆ ಸಂಬಂಧಿಸಿದ ಪೊನ್ನಿಯಿನ್‌ ಸೆಲ್ವನ್‌ನಲ್ಲಿ ತುಳುವಿನ ಐಶ್ವರ್ಯ ರೈ ಕೂಡ ನಟಿಸಿದ್ದಾರೆ.