ಮಂಗಳೂರು: ಬದ್ರಿಯಾ ಜುಮಾ ಮಸೀದಿ ಬಜಾಲ್ ನಂತೂರಿನಲ್ಲಿ  ಅಧ್ಯಕ್ಷರಾದ ಮಾನ್ಯ!  ಅಬ್ದುಲ್ ರವೂಫ್  ರವರ ಸಹಬಾಗಿತ್ವ ಹಾಗೂ ಸ್ಥಳೀಯ ಖತೀಬರಾದ ಬಹು! ಅಬ್ದುಲ್ ನಾಸಿರ್ ಸಅದಿ ಯವರ ನೇತ್ರ್ ತ್ವದಲ್ಲಿ  ಈದುಲ್ ಅಲ್ಲಾ (ಸಂಭ್ರಮದ ಸಡಗರ) ಆಚರಿಸಲಾಯಿತು.  

ಪ್ರಸ್ತುತ ಕಾರ್ಯಕ್ರಮದ ಪ್ರಾರಂಭದಲ್ಲಿ ಖತೀಬರು ಬಾಷಣಗೈದರು ತನ್ನ ಭಾಷಣದಲ್ಲಿ ಮನುಷ್ಯರಾದ ನಮಗೆ ತ್ಯಾಗ ಸಮರ್ಪನೆ ಸಹನೆ ಕ್ಷಮೆ ಅಗತ್ಯವಾಗಿದೆ ದೀನೀ ಕಾರ್ಯದಲ್ಲಿ ಜಮಾಅತರಾದ ಪ್ರತಿಯೊಬ್ಬರೂ ಕೈಜೋಡಿಸಿ ಪರಸ್ಪರ ದ್ವೇಷ ಕೋಪ ವನ್ನು ಪರಸ್ಪರ ಕ್ಷಮೆಯನ್ನು ನೀಡಿ ಪರಸ್ಪರ ಪ್ರೀತಿಯೊಂದಿಗೆ ಒಗ್ಗಟ್ಟಿನಲ್ಲಿ ಬಾಳಿ ದೀನೀ ಚೌಕಟ್ಟಿನಲ್ಲಿ ಜೀವಿಸಿ ಎಲ್ಲರ ಪ್ರೀತಿಗೆ ಪಾತ್ರರಾಗೋಣ  ಉಪದೇಶ ನೀಡಿದರು. ಕೊನೆಗೆ ಈದ್ ನಮಾಝ್ ಬಳಿಕ ಖುತುಬಾ ಪಾರಾಯಣ ನಡೆಸಿ ನಂತರ ಕೂಟು ಪ್ರಾರ್ಥನೆ ಹಾಗೂ ಪರಸ್ಪರ ಹಸ್ತಲಾಂಘಣ ನಡೆಸಿ ಕಾರ್ಯಕ್ರಮವನ್ನು ಕೋನೆಗೊಳಿಸಲಾಯಿತು. 

ನಿಕಟಪೂರ್ವ ಮ ನ ಪಾ ಸದಸ್ಯ ಅಶ್ರಫ್ ಬಜಾಲ್, ಮಾಜಿ ಬಿ ಜೆ ಎಂ ಅಧ್ಯಕ್ಷ ಅಬ್ಬಾಸ್ ಹಾಜಿ, ಸಂಚಾಲಕರು ಬಿ ಪಕ್ರುದ್ದೀನ್. ನಝೀರ್ ಬಜಾಲ್, ಇಕ್ಬಾಲ್ ಅಹಸನಿ ನೂರಾರು ಜಮತರು ಉಪಸ್ಥಿತರಿದ್ದರು.