ಮೂಡುಬಿದಿರೆ: ಜೈನ ಕಾಶಿ ಮೂಡುಬಿದಿರೆಗೆ 108 ಪೂರಣ ಸಾಗರ್ ಮುನಿ ಕಾರ್ಕಳದಿಂದ ಆಗಮಿಸಿ ಪುರ ಪ್ರವೇಶ ಮಾಡಿದರು. 108 ಕುಂಥು ಸಾಗರ ಮುನಿ ಮಹಾರಾಜ್ ಪುರ ಪ್ರವೇಶ ಮಾಡಿದ್ದು ಇಬ್ಬರು ದಿಗಂಬರ ಸಾದುಗಳು ರಾಷ್ಟ್ರ ಸಂತ ಆಚಾರ್ಯ ವಿದ್ಯಾ ಸಾಗರ ಶಿಷ್ಯರಾಗಿದ್ದು ಕುಂಥು ಸಾಗರ ಮುನಿ ರಾಜ್ ಜೈನ ಕಾಶಿಯಲ್ಲಿ ನಾಲ್ಕು ದಿನ ಮೊಕ್ಕಾo ಇರುವರು.


ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ನೇತೃ ತ್ವದಲ್ಲಿ ಗುರುಗಳ ಪಾದಪೂಜೆ ನೆರವೇರಿಸಿ ಸಿದ್ದಾ oಥ ದರ್ಶನ, ರತ್ನಬಿಂಬ ದರ್ಶನ 18 ಬಸದಿ ದರ್ಶನ ನೆರವೇರಿತು.ಕಾರ್ಕಳದಿಂದ ಮುನಿ ವಿಹಾರ ಜತೆಗೆ ಸನತ್ ಕುಮಾರ್, ರಾಕೇಶ್ ಜೈನ್, ಮಹಾ ಲಕ್ಷ್ಮಿ, ರೋಹಿಣಿ, ಸುರಕ್ಷಾ ಮೊದಲಾದವರು ಜತೆಗಿದ್ದರು ಸಂಜೆ ಗುರುಗಳ ಆರತಿ, ಸ್ವಾಧ್ಯಯ ಕಾರ್ಯಕ್ರಮ ಶ್ರೀ ಮಠದಲ್ಲಿ ಆಯೋಜನೆಗೊಂಡಿದೆ.