ಮಂಗಳೂರು,(ಡಿಸೆಂಬರ್ 28):-  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‍ಗಳನ್ನು ವಿತರಣೆ/ ನವೀಕರಣ ಮಾಡಲು ಫೆಬ್ರವರಿ 28 ರವರೆಗೆ ಮಾನ್ಯ ಮಾಡಲಾಗುತ್ತದೆ.

ಜನವರಿ 15 ರಿಂದ ವಿಕಲಚೇತನರ ಪಾಸ್‍ಗಳ ವಿತರಣೆ/ ನವೀಕರಣವನ್ನು ಪ್ರಾರಂಭಿಸಲಾಗುವುದು.  ಫಲಾನುಭವಿಗಳು ರೂ. 660 ನಗದು ರೂಪದಲ್ಲಿ ಪಾವತಿಸಿ ಪ್ರಸ್ತುತ ಸಾಲಿಗೆ ಪಾಸ್ ಪಡೆಯಬಹುದಾಗಿದೆ. ನವೀಕರಣ/ಹೊಸ ಪಾಸು ಪಡೆಯುವ ಫಲಾನುಭವಿಗಳು ಅರ್ಜಿಯನ್ನು  ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ಫಲಾನುಭವಿಗಳು ಫೆಬ್ರವರಿ 28 ರೊಳಗೆ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ಅನ್ನು ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗೀಯ ದೂ. ಸಂಖ್ಯೆ: 08251-235421  ಸಂಪರ್ಕಿಸುವಂತೆ  ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.