ಮೂಡುಬಿದಿರೆ:- ಅಕ್ಟೋಬರ್ 2 ರಂದು ವಿಶ್ವ ಅಹಿಂಸಾ ದಿನ ಆಚರಣೆ ಪ್ರಯುಕ್ತ ಧವಲ ತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ದಿಗoಬರ  ಜೈನ ಮಠದ  ಜಂಟಿ ಆಶ್ರಯದಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಪಾವನ ಸಾನ್ನಿಧ್ಯ ಆಶೀರ್ವಾದಗಳೊಂದಿಗೆ  ಮಹಾ ಕವಿ ರತ್ನಾಕರ ವರ್ಣಿಯ 100 ನೇಯ  ರತ್ನಕರ ಶತಕ ಕಾವ್ಯ ವಾಚನ ಮತ್ತು ಪ್ರವಚನ ವನ್ನು  ವಿದ್ಯಾ ವಾಚಸ್ಪತಿ ಡಾ ಎಚ್. ಪಿ ಮೋಹನ್ ಕುಮಾರ್ ಶಾಸ್ತ್ರಿ,  ಮಂಡ್ಯ ಇವರು ನೆರವೇರಿಸಿ ಕೊಡಲಿದ್ದಾರೆ.

 ಬೆಳಿಗ್ಗೆ 10.30 ಕ್ಕೆ ಭಟ್ಟಾರಕ ಭವನದಲ್ಲಿ ಕಾರ್ಯಕ್ರಮ ಜರುಗಲಿದ್ದು,  ಅತಿಥಿಗಳಾಗಿ ಮಾಜಿ ಸಚಿವ  ಕೆ ಅಭಯಚಂದ್ರ ಜೈನ್ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ , ಯಂ ಬಾಹುಬಲಿ ಪ್ರಸಾದ್,  ಉಪಸ್ಥಿತರಿರುವರು.

ನಿವೃತ್ತ ಪ್ರೊ ಅಜಿತ್ ಪ್ರಸಾದ್, ಡಾ ಎಸ್. ಪಿ ವಿದ್ಯಾ ಕುಮಾರ್  ಅತಿಥಿ ಉಪನ್ಯಾಸ ನೀಡಲಿದ್ದು ,ಅಂದ್ರ ಪ್ರದೇಶ ಅಮರ ಪುರ ಮದನ್ ಪಂಡಿತ್, ನೆಲೆ ನೆಲೆ ಉದಯ ಪಂಡಿತ್, ಡಾಕ್ಟರೇಟ್ ಪಡೆದ ಪ್ರಭಾತ್ ಬಲ್ನಾಡು ಪೇಟೆ, ಉಪನ್ಯಾಸಕ ನೇಮಿರಾಜ್ ಇವರಿಗೆ ಶ್ರೀ ಮಠದ ವತಿಯಿಂದ ಸನ್ಮಾನವಿರುತ್ತದೆ. 

ಮಧ್ಯಾಹ್ನ 12 ರಿಂದ 1.00 ರವರೆಗೆ  ಅನುಷಾ, ಕುಮಾರಿ ಶ್ರವಣ ಇವರ  ಭರತ ನಾಟ್ಯ  ಕಾರ್ಯಕ್ರಮ ಆಯೋಜಿಸಲಾಗಿದೆ. ಸರಕಾರದ ನಿಯಮಾವಳಿಯಂತೆ ಕೋವಿಡ್ 19 ಕಾರಣ ಸೀಮಿತ ಸಂಖ್ಯೆಯ ಆಹ್ವಾನಿತರುಗಳು ಬಿಟ್ಟು ಉಳಿದವರಿಗೆ  ಮನೆಯಲ್ಲೆ ಕುಳಿತು ನೇರ ಪ್ರಸಾರ  ಕಾರ್ಯಕ್ರಮ ವನ್ನು ಫೇಸ್ಬುಕ್ ಪೇಜ್ ಮೂಲಕ  ವೀಕ್ಷಣೆ ಮಾಡು ವ ವ್ಯೆವಸ್ಥೆ ಮಾಡಲಾಗಿದೆ, ಎ೦ದು  ಶ್ರೀ ಜೈನ ಮಠ ಮೂಡುಬಿದಿರೆ ವ್ಯೆವಸ್ಥಾಪಕರು,ಸಂಜಯಂಥ ಕುಮಾರ್ ಶೆಟ್ಟಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ವಿವರ:- ಸ್ಪಿರಿಚುವಲ್  -ಡಿವೋಷನ್  ಪೇಜ್ (Sprituval Devotion &jainkashi page) ಮಕ್ಕಿಮನೆ ಕಲಾ ವ್ರoದ ಪೇಜ್.