ಹೇ ಗೌರಿತನಯ, ಮಾನವರ
ಬದುಕೆಲ್ಲಾ ಇದೀಗ ಗೌಜುಗಮಯ
ನೀಡು ಯುಕ್ತಿ ತುಂಬಿದ ಶಕ್ತಿಯ
ಪೊರೆಯಲು ಧರೆಯ ಗರಿಕೆ ಪ್ರಿಯ
ಲಂಬೋದರ ನೀಗಿಸು ಈ ಬರ
ದಯಪಾಲಿಸು ಕರುಣೆಯ ವರ
ನೀನಾಗ ಬೇಕಿದೆ ಸಕಲ
ಕಷ್ಟವ ನೀಗೋ ಸಂಕಷ್ಟಕರ
ಹರಸಿ ಹಾರೈಸು ಮಾತೆಯ
ಮಡಿಲು ಸದಾ ಹಸಿರಾಗಿರಲಂತ
ಇರಲಿ ಧಾವಂತ ಭುವಿಯ
ಮಾರಿಯ ಮುಗಿಸೋ ಏಕದಂತ
-By ಮಾಗಿದ ಮನಸ್ಸು