ಮಂಗಳೂರು ಮಾರ್ಚ್ 24 (ಕರ್ನಾಟಕ ವಾರ್ತೆ):- ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಏಪ್ರಿಲ್ 4 ರಿಂದ 14 ರವರೆಗೆ ನಡೆಯಲಿದ ಸೇನಾ ನೇಮಕಾತಿ ರ್ಯಾಲಿಯನ್ನು ಕಾರಣಾಂತರಗಳಿಂದ ಜನವರಿ 20201ಕ್ಕೆ ಮುಂದೂಡಲಾಗಿದೆ.
ನೇಮಕಾತಿ ರ್ಯಾಲಿಗೆ ಈಗಾಗಲೇ ತಮ್ಮ ಹೆಸರುಗಳನ್ನು ನೊಂದಾಯಿಸಿರುವವರು ಮತ್ತೊಮ್ಮೆ ನೊಂದಾಯಿಸುವ ಅವಶ್ಯಕತೆ ಇರುವುದಿಲ್ಲ. ಮುಂದೂಡಿದ ನೇಮಕಾತಿ ರ್ಯಾಲಿಗೆ ಅರ್ಹರಿರುವ ಅಭ್ಯರ್ಥಿಗಳು ಎಲ್ಲಾ ರೀತಿಯಲ್ಲೂ ಜನವರಿ 2021 ರ ನೇಮಕಾತಿ ರ್ಯಾಲಿಗೆ ಅರ್ಹರಿರುತ್ತಾರೆ ಎಂದು ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಂಟಿ ನಿರ್ದೇಶಕರು ಪ್ರಕಟಣೆ ತಿಳಿಸಿದೆ.