ಮಂಗಳೂರು:- ಈ Covid- 19, ಕೊರೋನ ಕಾಲಘಟ್ಟದಲ್ಲಿ ಶಾಲೆಗಳು ತೆರೆಯದೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕರಿನೆರಳು ಹಬ್ಬಿದ ಈ ಸಂದರ್ಭದಲ್ಲಿ ಹೊಸ ಆಶಾಕಿರಣವಾಗಿ ಮಂಗಳೂರಿನಲ್ಲಿ ಯುವ ಅಧ್ಯಾಪಕ - ಅಧ್ಯಾಪಿಕೆಯರು ಸೇರಿಕೊಂಡು e- School for Remote Academia (e-SRA) ಎಂಬ ಹೆಸರಿನ ಸಂಪೂರ್ಣ ಪ್ರಮಾಣದ online ಶಾಲೆಯನ್ನು ಐದನೇ ಪೀಳಿಗೆಯ ಕಲಿಕಾ ತಂತ್ರಜ್ಞಾನ ಬಳಸಿ ಪ್ರಸ್ತುತ ಪಡಿಸಿದ್ದಾರೆ, ಅಂಕುರಂ ಎಜುಕೇಷನಲ್ ಟ್ರಸ್ಟ್(ರಿ) ನ ಅಡಿಯಲ್ಲಿ ಕಾರ್ಯನಿರ್ವಹಿಸುವ e-SRA ದ ಉದ್ಘಾಟನಾ ಸಮಾರಂಭ Google meet ನ ವೇದಿಕೆಯಲ್ಲಿ ನಡೆಯಿತು.
ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಗುರಿ ಹೊಂದಿರುವ ಈ ಸಂಸೆಯು ಪೂರ್ಣಪ್ರಮಾಣದಲ್ಲಿ ಅಂತರ್ಜಾಲದ ನೆರವಿನಲ್ಲಿ ನಡೆಯಲಿದ್ದು, ಕರ್ನಾಟಕದ ಮೊದಲ ಆನ್ಲೈನ್ ಸ್ಕೂಲ್ ಎನಿಸಿಕೊಳ್ಳಲಿದೆ.
e-SRA ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿರುವ ಡಾ. ಪಿ, ಸುಬ್ರಹ್ಮಣ್ಯ ಯಡಪಡಿತ್ತಾಯರು , "e-SRA ವು ಸಂಪೂರ್ಣ ವೈಜ್ಞಾನಿಕ ಮತ್ತು ಕಲಿಕಾ ಮನಶಾಸ್ತ್ರದ ಆಧಾರದಲ್ಲಿದ್ದು, ಭಾರತದಲ್ಲಿ ಶಿಕ್ಷಣ ಕ್ಷೇತ್ರದ ಕಾಂತಿಗೆ ನಾಂದಿ ಹಾಡಲಿದೆ" ಎಂದರು.
ಇದೇ ಕಾರ್ಯಕ್ರಮದ ಗೌರವ ಅತಿಥಿಗಳಾದ Times of India ದ ಅಂಕಣಕಾರರಾಗಿ ಹಾಗೂ ಪ್ರಸ್ತುತ Centre for Integrated Learning, Mangalore, ಇದರ ಸಹ - ಸಂಸ್ಕಾಪಕರು ಆಗಿರುವ ಶ್ರೀನಿವಾಸನ್ ನಂದಗೋಪಾಲ್ ರವರು ಮಾತನಾಡಿ " ಜಗತ್ತಿನ ಬದಲಾವಣೆಯನ್ನು ಅರಿತು, ಹೊಸ ಚಿಂತನೆಯಿಂದ ಹುಟ್ಟಿದ ಸಂಖ್ಯೆಗೆ ಶುಭ ಹಾರೈಸಿದರು."
ಅಂಕುರಂ ಎಜುಕೇಶನಲ್ ಟ್ರಸ್ಟ್ ನ ವ್ಯವಸಾಪಕ ನಿರ್ದೇಶಕರು, ಅಕ್ಷಯ್ ಕೆ ಪಣಿಕ್ಕರ್ ಅವರು ಸಂಖ್ಯೆಯ ಕಾರ್ಯಸೂಚಿ ಮತ್ತು ಭವಿಷ್ಯದ ಯೋಜನೆಯನ್ನು ಪ್ರಸ್ತುತ ಪಡಿಸಿದರು. ಮಾಜಿ ಕಾರ್ಪೊರೇಟರ್ ಹಾಗೂ ಟ್ರಸ್ಟ್ ನ ಸ್ಮಾಪಕರು ಆಗಿರುವಂತಹ ಕೆ. ಪದ್ಮನಾಭ ಪಣಿಕ್ಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಖ್ಯೆಯ ರಸಾಯನಶಾಸ್ತ್ರ ಅಧ್ಯಾಪಿಕೆ ನಗ್ಮಾ ಬಾನು ಸ್ವಾಗತಿಸಿದರು. ಇಂಗ್ಲಿಷ್ ಅಧ್ಯಾಪಕಿ ಆತ್ಮ ಇನಾಯತುಲ ಮತ್ತು ಜೀವಶಾಸ್ತ್ರ ಉಪನ್ಯಾಸಕಿ ಅಮ್ಮತಲಕ್ಷ್ಮಿ ಭಟ್ ಅತಿಥಿಗಳನ್ನು ಪರಿಚಯಿಸಿದರು. ರಸಾಯನ ಶಾಸ್ತ್ರ ವಿಭಾಗದ ಪ್ರೊ. ಪ್ರವೀಣ್ ಕುಮಾರ್ ಅವರು ವಂದಿಸಿದರು. ಜೀವಶಾಸ್ತ್ರ ವಿಭಾಗದ ಅಧ್ಯಾಪಿಕೆ ಮಿಲನ ಕಾರ್ಯಕ್ರಮ ನಿರೂಪಿಸಿದರು.