ಕಾರ್ಕಳ:- ಕಾರ್ಕಳ ತಾಲೂಕು ರಾಜ್ಯ ಸರಕಾರಿ ನೌಕರರ ಪತ್ತಿನ ಸಹಕಾರಿ ಸಂಘ(ನಿ) ಕಾರ್ಕಳ ಇದರ 2020-21 ರಿಂದ 2024-25 ನೇ ಸಾಲಿನ ಅಧ್ಯಕ್ಷರಾಗಿ ಬಿ.ವಿ. ಶಿವರಾಮ್ ರಾವ್, ಹಿರಿಯ ಆರೋಗ್ಯ ನಿರೀಕ್ಷಕರು, ಕಾರ್ಕಳ, ಉಪಾಧ್ಯಕ್ಷರಾಗಿ ಮಂಜುನಾಥ್ ನಾಯಕ್, ಕಂದಾಯ ನಿರೀಕ್ಷಕರು, ಅಜೆಕಾರು ಹೋಬಳಿ, ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.  

ಬಿ.ವಿ. ಶಿವರಾಮ್ ರಾವ್, ಕರ್ನಾಟಕ ಸರಕಾರದಿಂದ ಗಣರಾಜ್ಯೋತ್ಸವದಂದು ರಾಜ್ಯ ಸರಕಾರಿ ನೌಕರರಿಗೆ ನೀಡುವ ಜಿಲ್ಲಾ ಮಟ್ಟದ 2019-20 ನೇ ಸಾಲಿನ  “ಸರ್ವೋತ್ತಮ ಪ್ರಶಸ್ತಿ” ಪಡೆದಿರುತ್ತಾರೆ. ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ), ತಾಲೂಕು ಶಾಖೆ, ಕಾರ್ಕಳ, ಇದರ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ದಿನಾಂಕ 29/09/2020 ರಂದು ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ  ಚುನಾವಣಾ ನಿರ್ವಹಣಾಧಿಕಾರಿಯಾಗಿ ಕೆ.ಆರ್. ರೋಹಿತ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿರುತ್ತಾರೆ. ಪತ್ತಿನ ಸಹಕಾರಿ ಸಂಘದ ಸಹಾಯಕಿಯಾಗಿ ಯಶೋಧ ಮಾಧವ ಸಹಕರಿಸಿದ್ದರು. 

ಸಾಮಾನ್ಯ ವರ್ಗದ ನಿರ್ದೇಶಕರಾಗಿ ಲಿಂಗಪ್ಪ ಎ., ನ್ಯಾಯಾಂಗ ಇಲಾಖೆ, ಸಿ.ಮಾರುತಿ, ಕಂದಾಯ ಇಲಾಖೆ, ಶೇಖರ ಪೂಜಾರಿ ಎಂ. ಆರೋಗ್ಯ ಇಲಾಖೆ, ಸುಶ್ಮಿತಾ, ಕಂದಾಯ ಇಲಾಖೆ, ಜೋಕಿಂ ಮೈಕಲ್ ಹೆಚ್. ಪಿಂಟೊ, ವಾಣಿಜ್ಯ ತೆರಿಗೆ ಇಲಾಖೆ, ಮಹಿಳಾ ಮೀಸಲು ಸ್ಥಾನದಿಂದ ಸಿಂಧೂರ ವೈ.ಆರ್., ಕಂದಾಯ ಇಲಾಖೆ, ಶ್ವೇತಾ ಆರ್ ಹೆಗ್ಡೆ, ಕಂದಾಯ ಇಲಾಖೆ, ಹಿಂದುಳಿದ ಪ್ರವರ್ಗ ‘ಎ’, ನಿಶಾ.ಎ.ಆರ್., ಕಂದಾಯ ಇಲಾಖೆ, ಹಿಂದುಳಿದ ಪ್ರವರ್ಗ ‘ಬಿ’., ಎಸ್. ಸುಧಾಕರ ಶೆಟ್ಟಿ, ತಾಲೂಕು ಪಂಚಾಯತ್, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ನಿವೇದಿತಾ ಕುಮಾರಿ, ಕಂದಾಯ ಇಲಾಖೆ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಉದಯ ನಾಯಕ್ ಹೆಚ್., ಆರೋಗ್ಯ ಇಲಾಖೆ, ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.