ಈಗ ಇವರು ಏನು ಮಾಡುತ್ತಾರೆ ನೋಡೋಣ....ಮೊನ್ನೆಯ ರಾಜ್ಯದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೀರಿನ ಬರ ಪರಿಸ್ಥಿತಿ ಮತ್ತು ಈ ಸಲದ ಮಳೆಯ ಪ್ರಮಾಣ ಕಡಿಮೆ ಆಗಿರುವ ಆಧಾರದಲ್ಲಿ ಎತ್ತಿನಹೊಳೆ ಯೋಜನೆಯನ್ನು ತಡೆಯಿರಿ ಮತ್ತು ನೇತ್ರಾವತಿ ನದಿ ಮತ್ತು ಪಶ್ಚಿಮ ಘಟ್ಟದ ಮಡಿಲಿಗೆ ಯಾವುದೇ ಅಸಂಬದ್ಧ ಯೋಜನೆಗಳನ್ನು ಮಾಡದೇ ರಾಜ್ಯದ ಹಾಗೂ ಜಿಲ್ಲೆಯ ಒಳಿತಿಗೆ ಜನಪ್ರತಿನಿಧಿಯಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲೆಯ ಎಲ್ಲಾ ಶಾಸಕರಿಗೆ ಮತ್ತು ದಕ್ಷಿಣ ಕನ್ನಡ , ಚಿಕ್ಕಬಳ್ಳಾಪುರ ಸಂಸದರಿಗೆ ಮನವಿ ಪತ್ರಗಳ ನು ಕಳಿಸಲಾಗಿದೆ. ಅದು ಅವರಿಗೆ ತಲುಪಿದೆ ( ಈ ಹಿಂದೆ ಇದೇ ರೀತಿ ಪತ್ರ ಕಳುಹಿಸಿದಾಗ ತಲುಪಿದ್ದರೂ ತಮಗೆ ತಲುಪಿಲ್ಲ ಎಂದು ಕೆಲವರು ಸುಳ್ಳು ಹೇಳಿದ್ದರು ) ಎಂದು ಅವರು ಸಹಿ ಹಾಕಿರುವ ಅಕ್ನೋಲೋಜ್ಮೆಂಟ್ ಕಾರ್ಡ್ ನಮಗೆ ತಲುಪಿದೆ. ಇಬ್ಬರು ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ಬಗ್ಗೆ ವಿಧಾನ ಸೌಧದಲ್ಲಿ ವಿರೋಧಿಸುತ್ತೇನೆ ಎಂದಿದ್ದರು. ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸುವ ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ ಇವರಿಗೆ ಇದ್ದರೆ ಇದೀಗ ಸುಸಂದರ್ಭ..ಯಾಕೆಂದರೆ ರಾಜ್ಯದಲ್ಲೂ, ಕೇಂದ್ರದಲ್ಲೂ ಇವರದ್ದೇ ಸರಕಾರ ಇದ್ದ ಕಾರಣ .. ಇನ್ನೂ ಈ ಬಗ್ಗೆ ಮಾತಾಡುವುದಿಲ್ಲ ಅಂದರೆ ರಾಜ್ಯದ ಮತ್ತು ಜಿಲ್ಲೆಯ ಜನತೆಯ ಹಣೆಬರಹ ಅಷ್ಟೇ...ಜಿಲ್ಲೆಯ ಹಿಂದಿನ ಶಾಸಕರಿಗೆ ಒಮ್ಮೆ ಈ ರೀತಿ ಮನವಿ ನೀಡಿದಾಗ ಅವರು ಅದನ್ನು ನಿರ್ಲಕ್ಷ ಮಾಡಿದಾಗ ದಸರಾ ಸಂದರ್ಭದಲ್ಲಿ 9 ದುರ್ಗೆಯರ ವೇಷ ಧರಿಸಿ ( ನೇತ್ರಾವತಿ ಗೂ 9 ಉಪನದಿಗಳು ) ಅವರ ಕೈಯಲ್ಲಿ ಮಣ್ಣಿನ ಮಡಕೆಯಲ್ಲಿ ನೇತ್ರಾವತಿ ತುಳುನಾಡಿನ ದೇವರು ಇದನ್ನು ಉಳಿಸುತ್ತೀರಾ..
ಅಳಿಸು ತ್ತೀರಾ ಎಂದು ಬರೆದು ನೇತ್ರಾವತಿಯ ನೀರು ತುಂಬಿಸಿ ಅದನ್ನು ರೊಸರಿಯೋ ಚರ್ಚು, ಪಾಂಡೇಶ್ವರ ಮಸೀದಿ, ಮಂಗಳಾದೇವಿ ದೇವಸ್ಥಾನದಲ್ಲಿ ನೇತ್ರಾವತಿಯ ನೆಮ್ಮದಿ ಹಾಳು ಮಾಡಿದವರು ಹಾಳಾಗಿ ಹೋಗಲಿ ಎಂದು ಪ್ರಾರ್ಥನೆ ಮಾಡಿಸಿ ಆ ಪಾತ್ರೆಗಳನ್ನು ಜನಪ್ರತಿನಿಧಿ ಗಳಿಗೆ ಕಳಿಸಿ ಕೊಟ್ಟಿದ್ದೆವು...ನೇತ್ರಾವತಿಯ ಶಾಪವೋ ಏನೋ ದ.ಕ. ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ( ವೀರಪ್ಪ ಮೊಯ್ಲಿ ) ಸೋತು ಹೋದರು. ಅದೇ ರೀತಿ ಇವರೂ ಈ ಬಗ್ಗೆ ಮೌನ ವಹಿಸಿದಲ್ಲಿ ಇವರ ಪಾಡೂ ಹಾಗೆ ಆಗಲಿ. ಇಲ್ಲಿ ಪಕ್ಷ ಮುಖ್ಯ ಅಲ್ಲ, ನೇತ್ರಾವತಿ ನದಿ ಮತ್ತು ಪಶ್ಚಿಮ ಘಟ್ಟದ ಭದ್ರತೆ ಮುಖ್ಯ. ಭವಿಷ್ಯದ ನೆಮ್ಮದಿ ಮುಖ್ಯ. ಸಂಪೂರ್ಣ ಬರ ಪೀಡಿತ ಕಾಲ ಬಂದಾಗ ಯಾವ ಪಕ್ಷ, ಯಾವ ರಾಜಕಾರಣಿಯೂ ಇರುವುದಿಲ್ಲ,. ಆಗ ಅನುಭವಿಸಬೇಕಾದ ವರು ನಾವು, ನೀವು ಎಲ್ಲರೂ...
ದಿನೇಶ್ ಹೊಳ್ಳ