ಉಡುಪಿ ಮಾರ್ಚ್ 21 (ಕರ್ನಾಟಕ ವಾರ್ತೆ): ರಾಜ್ಯದ ಎಲ್ಲಾ ಕೇಂದ್ರ/ ಜಿಲ್ಲಾ ಕಾರಾಗೃಹಗಳ ಸಂದರ್ಶಕರ ಮಂಡಳಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಪರವಾಗಿ ಒಬ್ಬ ಅಧಿಕಾರೇತರ ಸದಸ್ಯರನ್ನು ಪ್ರತ್ಯೇಕವಾಗಿ ನಾಮನಿರ್ದೇಶನ ಮಾಡಬೇಕಾಗಿರುತ್ತದೆ.

ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆಗಳ (ಕಡ್ಡಾಯವಾಗಿ ನೊಂದಾಯಿತ ಸಂಘ ಸಂಸ್ಥೆ) ಸದಸ್ಯರುಗಳು ಅಥವಾ ಸಮಾಜ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಾಕರ್ತರುಗಳಲ್ಲಿ 35 ವರ್ಷ ಮೇಲ್ಪಟ್ಟು 60 ವರ್ಷದೊಳಗಿನ ವಯೋಮಿತಿಯಲ್ಲಿನ ಉತ್ತಮ ನಡತೆ ಮತ್ತು ಚಾರಿತ್ರ್ಯವುಳ್ಳಂತಹ ಹಾಗೂ ಅವರುಗಳ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗದೇ ಇರುವಂತಹ ಅಥವಾ ಹೂಡುವಿಕೆಯಲ್ಲಿರದಂತಹ ಸದಸ್ಯರುಗಳು, ಇತ್ತೀಚಿನ 3 ಭಾವಚಿತ್ರ, ಯಾವುದಾದರೂ ದೃಢೀಕೃತ ಗುರುತಿನ ಚೀಟಿ (ಸರಿಯಾದ ವಯೋಮಾನ ಹೊಂದಿರುವಂತಹ), ನೊಂದಾಯಿತ ಸಂಘಸಂಸ್ಥೆಯ ಸದಸ್ಯತ್ವದ / ಪದಾಧಿಕಾರದ ಗುರುತಿನ ಚೀಟಿ, ಹಾಗೂ ವಿವರವಾದ ಮಾಹಿತಿಯನ್ನು ಒಳಗೊಂಡ ಬಯೋಡಾಟ (ರೆಸ್ಯೂಮ್) ಹಾಗೂ ಮಾನವ ಹಕ್ಕುಗಳ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿಯ ದಾಖಲೆಗಳೊಂದಿಗೆ ಅರ್ಜಿಯನ್ನು ಅಧೀಕ್ಷರು, ಜಿಲ್ಲಾ ಕಾರಾಗೃಹ, ಹಿರಿಯಡ್ಕ ಅಂಚೆ, ಉಡುಪಿ ಇವರಿಗೆ ಒಂದು ವಾರದ ಒಳಗಾಗಿ (ಮಾರ್ಚ್ 27 ರ ಒಳಗೆ)  ಸಲ್ಲಿಸುವಂತೆ  ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.