ಮೂಡುಬಿದಿರೆ: ದ.ಕ ಜಿಲ್ಲೆಯಲ್ಲಿ ಬಿಲ್ಲವರಿಗೆ ಇದ್ದಂತಹ ಕೂಡುಕಟ್ಟು ಬೇರೆ ಎಲ್ಲೂ ಇರಲಿಲ್ಲ. ಯಾವ ವ್ಯಕ್ತಿಗೆ ತನ್ನ ಪರಂಪರೆಯ, ಹಿರಿಯರ ಚರಿತ್ರೆ ಗೊತ್ತಿರುತ್ತದೋ ಆ ವ್ಯಕ್ತಿ ದಾರಿ ತಪ್ಪುವುದಿಲ್ಲ ಎಂದು ತುಳು ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆ, ಶ್ರೀ ನಾರಾಯಣಗುರು ಸೇವಾದಳ ಮತ್ತು ಶ್ರೀ ನಾರಾಯಣಗುರು ಮಹಿಳಾ ಘಟಕದ ವತಿಯಿಂದ ಅಮೃತ ಮಹೋತ್ಸವ ಸಂಭ್ರಮ 2025 ಪ್ರಯುಕ್ತ ಸಂಘದ ಅಮೃತ ಸಭಾಭವನದಲ್ಲಿ ನಡೆದ ' ಬಿರುವೆರ್ ಕೂಡುಕಟ್ಟ್' ಮದಿಪು-ತುಲಿಪು ಸಂವಾದದಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆವಹಿಸಿ ಮಾತನಾಡಿ ಕಳೆದ 74 ವರ್ಷಗಳ ಇತಿಹಾಸವನ್ನು ಹೊಂದಿರುವ ನಮ್ಮ ಸಂಘ ನಿರಂತರ ಸಮಾಜಿಕಮುಖಿ ಕೆಲಸವನ್ನು ಮಾಡುತ್ತಾ ಬಂದಿದೆ. ಬಿಲ್ಲವ ಸಮುದಾಯ ಪರಂಪರೆ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ನೀಡಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದರು.
ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ರಾಘು ಸಿ. ಪೂಜಾರಿ ಮಾರ್ನಾಡ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು, ಸೇವಾದಳ ಅಧ್ಯಕ್ಷ ದಿನೇಶ್ ಪೂಜಾರಿ,ಮಹಿಳಾ ಘಟಕ ಅಧ್ಯಕ್ಷೆ ಸವಿತಾ ದಿನೇಶ್, ಉದ್ಯಮಿ ನಾರಾಯಣ ಪಿ.ಎಂ, ನಿವೃತ್ತ ಸಹಾಯಕ ಆಯುಕ್ತ ಅಚ್ಯುತ ಪಿ., ಅಮೃತ ಮಹೋತ್ಸವ ಸಮಿತಿ ಸಂಚಾಲಕ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.
ಗಣೇಶ್ ಅಳಿಯೂರು ಸ್ವಾಗತಿಸಿದರು. ಪ್ರಜ್ವಲ್, ರೋಹನ್ ಅತಿಕಾರಿಬೆಟ್ಟು ಹಾಗೂ ಸಂಜತಾ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುಶಾಂತ್ ಕರ್ಕೇರಾ ವಂದಿಸಿದರು.