ನದಿಗಳು ನಗರಗಳ ಬದುಕಿಗೆ ಬೆಳಕಾಗುತ್ತದೆ, ನಗರದ ಜನತೆಯ ಬದುಕಿಗೆ ಚೇತನಾ ಶಕ್ತಿಯಾಗುತ್ತದೆ. ಆದರೆ ನಗರಗಳ ಜನತೆ ನದಿಯನ್ನು ಆಳುತ್ತವೆ ಮತ್ತು ಅಳಿ ಸುತ್ತವೆ . ನದಿಯ ರೋದನಕ್ಕೆ ಕಿವಿಯಾಗ ದಿದ್ದರೆ ಭವಿಷ್ಯದಲ್ಲಿ ಒಂದು ಪ್ರಾಕೃತಿಕ ದುರಂತ ಗ್ಯಾರಂಟೀ...ಉಡುಪಿ ನಗರದ ನಡುವೆ ಇಂದ್ರಾಳಿ ನದಿ ಹರಿಯುತ್ತದೆ, ಹರಿಯುವ ನದಿಯನ್ನು ನಗರದ ಜನತೆ ಹರಿದು, ಹರಿದು ನದಿಯ ನೆಮ್ಮದಿಯನ್ನು ಕೆಡಿಸಿ ಇಂದ್ರಾಳಿ ನದಿ ಈಗ ವೇದನೆಯಿಂದ ತನ್ನ ರೋದನವನ್ನು ವ್ಯಕ್ತಪಡಿಸುತ್ತಿದೆ. ಸಮಾನ ಮನಸ್ಕ ಹಸಿರು ಗೆಳೆಯರು ಇಂದ್ರಾಳಿ ನದಿಯ ವೇದನೆಗೆ ಕಿವಿಯಾಗಿ ' ಇಂದ್ರಾಳಿ ಉಳಿಸಿ ' ಎಂಬ ಸಂಘಟನೆಯನ್ನು ಕಟ್ಟಿ ನದಿ ಸಂರಕ್ಷಣೆಗಾಗಿ ಹೋರಾಟವನ್ನು ಆರಂಭಿಸಿದ್ದಾರೆ. ಉಡುಪಿಯ ಸರ್ವ ಜನತೆ ಈ ಹೋರಾಟಕ್ಕೆ ಕೈ ಜೋಡಿಸಬೇಕು. ಕೇವಲ ' ಇಂದ್ರಾಳಿ ಉಳಿಸಿ ' ಹೋರಾಟ ಸಮಿತಿಯ ವರಿಗೆ ಮಾತ್ರ ನದಿ ಬೇಕಿ ರುವುದೇ... ಉಡುಪಿಯ ಉಳಿದವರು ನದಿಯ ಫಲಾನುಭವಿಗಳು ಅಲ್ಲವೇ ? ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಭದ್ರತೆಗಾಗಿ ಮತ್ತು ತಮ್ಮ ಮಕ್ಕಳ ಭವಿಷ್ಯದ ಭದ್ರತೆಗಾಗಿ ನದಿ ಮತ್ತು ಪರಿಸರವನ್ನು ಉಳಿಸಲೆಬೇಕಾದ ಸಾಮೂಹಿಕ ಜವಾಬ್ದಾರಿ ಈಗ ಎಲ್ಲರ ಮೇಲೂ ಇದೆ. ಉಡುಪಿ ನಗರದ ಒಂದು ಮಗ್ಗುಲಿನಲ್ಲಿ ಉಗಮವಾಗುವ ಇಂದ್ರಾಳಿ ನದೀ ಮೂಲದಲ್ಲಿ ಇರುವ ದಟ್ಟ ಅಡವಿಯ ನೈಸರ್ಗಿಕ ಸೊಬಗು ಉಡುಪಿಗೆ ಒಂದು ವಿಶೇಷ ಮೆರುಗು. ಇಂದ್ರಾಳಿ ನದಿಯ ಸಂರಕ್ಷಣೆ ಇನ್ನಷ್ಟು ಬಲವಾಗ ಲೀ.. ಎಲ್ಲರ ಸ್ವರ, ಕರ ಇರಲಿ ಸದಾ ಇಂದ್ರಾಳಿ ಯ ಪರ...ಜೈ ಇಂದ್ರಾಳಿ...ಜೈ ' ಇಂದ್ರಾಳಿ ಉಳಿಸಿ ' ಹೋರಾಟ ಸಮಿತಿ.
ದಿನೇಶ್ ಹೊಳ್ಳ