ಕಂಕನಾಡಿಯ ಕೋಟಿ ಚೆನ್ನಯ ಗರೊಡಿ ಕ್ಷೇತ್ರದಿಂದ ನಾರಾಯಣ ಗುರುಗಳ ಸ್ವಾಭಿಮಾನ ಯಾತ್ರೆಯು ಬೆಳಿಗ್ಗೆ ಎಂಟೂವರೆ ಗಂಟೆಗೆ ಹೊರಟಿತು.

ಇಡೀ ದಿನದ ನಡಿಗೆಯು ಸಂಜೆ ಗೋಕರ್ಣನಾಥೇಶ್ವರ ತಲುಪುವುದು.

ಈ ಸ್ವಾಭಿಮಾನದ ನಡಿಗೆಯು ನೀರುಮಾರ್ಗ, ಕೈಕಂಬ, ಗುರುಪುರ, ಬಜ್ಪೆ, ಸುಂಕದಕಟ್ಟೆ,  ಕಾವೂರು,ಕೂಳೂರು, ಸುರತ್ಕಲ್, ಕೊಳಾಯಿ, ಜ್ಯೋತಿ, ಹಂಪನಕಟ್ಟೆ, ಪಿ.ವಿ.ಎಸ್, ಕುದ್ರೋಳಿ ತಲುಪುವುದು.

ಜನಾರ್ದನ ಪೂಜಾರಿ ನೆನಕೆಯೊಡನೆ ನಾರಾಯಣ ಗುರುಗಳ ಒಂದೇ ಜಾತಿ, ಮತ ಮಾತಿನೊಂದಿಗೆ ಸಮಾನತೆಯ ಘೋಷಣೆ ಸಹಿತ ಈ ಯಾತ್ರೆ ಆರಂಭವಾಯಿತು.

ಪ್ರಕಾಶ್ ಸಾಲಿಯಾನ್, ಚಿತ್ತರಂಜನ್, ಡಿಸೋಜಾ, ಲೋಬೋ ಮೊದಲಾದವರು ಮಾತನಾಡಿದರು.