ಮಂಗಳೂರು, ಜೂನ್ 02: ಎಸ್‌ಡಿಪಿಐ ಸಮಾವೇಶದಲ್ಲಿ ದಲಿತರು ನಮ್ಮಂತೆ ದನದ ಮಾಂಸ ತಿನ್ನುವವರು ಎಂದು ನಮ್ಮನ್ನು ಕೀಳರಿಮೆಗೆ ದೂಡಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ವಿನಯನೇತ್ರ ದಡ್ಡಲ್ ಕಾಡ್ ಹೇಳಿದರು.

ನಾವು ದನವನ್ನು ಪೂಜಿಸುವವರು. ನಾವು ದನದ ಮಾಂಸ ತಿನ್ನುವವರಲ್ಲ. ಈ ಜನರು ನಮ್ಮ ಜನರ ಮೇಲೆ ಹಲ್ಲೆ ನಡೆಸಿರುವುದು ದೇಶದ ಉದ್ದಗಲದಲ್ಲಿ ನಡೆಯುತ್ತಿದೆ. ಅದಕ್ಕೆ ಆ ಸಂಘಟನೆ ಏನು ಮಾಡಿದೆ? ದಲಿತರು ಭಾರತೀಯರು. 

ನಾವು ಅಂಬೇಡ್ಕರ್ ನಂಬಿದ, ಸಂವಿಧಾನ ನಂಬಿದವರು, ನಮ್ಮ ಜನಾಂಗದ ಮತ್ತು ಸಂಘದ ವಿರುದ್ಧ ಹೇಳಿಕೆ ನೀಡಿದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಣ್ಣಿ ಎಳ್ತಿಮಾರ್ ಸುಳ್ಯ, ಭೋಜರಾಜ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.