ಉಜಿರೆ: ಎಸ್.ಎಸ್.ಎಲ್.ಸಿ. ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳು ಗಣಿತವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಉಪಯುಕ್ತ ಮಾಹಿತಿಯ ಕಣಜವಾಗಿರುವ ಪುಸ್ತಕವನ್ನು ಗುರುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

    ಪುಸ್ತಕದ ಕರ್ತೃಗಳಾದ ಪ್ರೊ.ಟಿ. ಪ್ರಕಾಶ್ ಪ್ರಭು ಮತ್ತು ವೀಣಾ ಶ್ಯಾನುಭಾಗ್, ಡಾ. ಪ್ರವೀಣ ಪ್ರಭು ಮತ್ತು ಡಾ. ಶ್ರೀಧರ ಭಟ್ ಉಪಸ್ಥಿತರಿದ್ದರು.

ಪುಸ್ತಕದ ಕರ್ತೃಗಳು: ಪ್ರೊ. ಟಿ. ಪ್ರಕಾಶ್ ಪ್ರಭು, ನಿವೃತ್ತ ಗಣಿತ ಪ್ರಾಧ್ಯಾಪಕರು, ಎಸ್.ಡಿ.ಎಂ. ಕಾಲೇಜು ಉಜಿರೆ ಮತ್ತು ವೀಣಾ ಗಣಪತಿ ಶಾನುಭಾಗ್, ಉಜಿರೆ

ಪ್ರಕಾಶನ: ಎಸ್.ಡಿ.ಎಂ. ಎಕ್ಸಲೆಂಟ್ ಪಬ್ಲಕೇಶನ್, ಉಜಿರೆ