ಮಂಗಳೂರು: ಕಾಳಜಿ ಕೇಂದ್ರದಲ್ಲಿ ಸುಮಾರು 10-12 ಮಂದಿ ಸರ್ಕಾರದ ಆಶ್ರಯವನ್ನು ಪಡೆದುಕೊಂಡಿದ್ದು ಮಧ್ಯಾಹ್ನ ಮತ್ತು ಸಂಜೆ ಅಲ್ಲಿ ಊಟಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಯಾರ ಮನೆಯಲ್ಲಿ ನೀರು ನುಗ್ಗಿ ಊಟವನ್ನು ತಯಾರಿಸಲು ಸಾಧ್ಯವಿಲ್ಲವೋ ಅಂತವರೆಲ್ಲರೂ ಕಾಳಜಿ ಕೇಂದ್ರಕ್ಕೆ ಬಂದು ಊಟವನ್ನು ಸೇವಿಸಿ ಹೋಗಬೇಕೆಂದು ಮಧ್ಯಾಹ್ನ ಮತ್ತು ಸಂಜೆ ಈ ವ್ಯವಸ್ಥೆಯನ್ನು ಮಾಡಬೇಕೆಂದು ಜಿಲ್ಲಾಧಿಕಾರಿ ಮತ್ತು ನಗರ ಪಾಲಿಕೆ ಕಮಿಷನರಿಗೆ ಸೂಚಿಸಿದ್ದಾರೆ.
ಅದೇ ರೀತಿ ಕೊಡಿಯಾಲ್ ಬೈಲ್ ಮತ್ತು ಇತರ ಭಾಗಗಳಲ್ಲಿ ಯಾರರ ಮನೆಯಲ್ಲಿ ನೀರು ನುಗ್ಗಿ ತಿಂಡಿ ತಿನಿಸುಗಳನ್ನು ತಯಾರಿಸಲು ಆಗದೆ ಇರುವವರು ಕದ್ರಿ ದೇವಸ್ಥಾನದಲ್ಲಿ ವ್ಯವಸ್ಥೆ ಮಾಡಬೇಕೆಂದು ದೇವಸ್ಥಾನದ ಆಡಳಿತ ಮುಖ್ಯಸ್ಥರಿಗೆ ಮತ್ತು ಜಿಲ್ಲಾಧಿಕಾರಿಗೆ ಮತ್ತು ನಗರ ಪಾಲಿಕೆ ಕಮಿಷನರಿಗೆ ಸೂಕ್ತ ಊಟದ ವ್ಯವಸ್ಥೆಯನ್ನು ಮಾಡಬೇಕೆಂದು ಸೂಚಿಸಿದ್ದಾರೆ. ಅದೇ ರೀತಿ ಅಂತವರು ಇದ್ರೆ ಕೂಡಲೇ ದೇವಸ್ಥಾನಕ್ಕೆ ತೆರಳಬೇಕೆಂದು ಈ ಸಂದರ್ಭದಲ್ಲಿ ಐವನ್ ಡಿಸೋಜಾ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಕಾಶ್ ಬಿ ಸಾಲಿಯನ್ ಅಧ್ಯಕ್ಷರು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಪ್ರೇಮ್ ಬಳ್ಳಾಲ್ ಬಾಗ್ ಮಾಜಿ ನಾಮ ನಿರ್ದೇಶನ ಸದಸ್ಯರು ಮ.ನಾ.ಪಾ, ದಿನೇಶ್ ಮೂಳೂರು ಜಿಲ್ಲಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ, ರವಿ ಸುಂಕದಕಟ್ಟೆ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಕಾಂಗ್ರೆಸ್ ಮುಖಂಡರಾದ ಸುನಿಲ್ ಕುಮಾರ್ ಬಜಿಲಕೇರಿ, ದಿನೇಶ್ ಶಿವನಗರ ಹಾಗೂ ಕೊಡಿಯಲ್ ಬೈಲ್ ವಾರ್ಡಿನ ಸದಸ್ಯರುಗಳು ಜೊತೆಗಿದ್ದರು.