ಮಂಗಳೂರು: ನಗರದ ಕಣ್ಣೂರು ಪ್ರದೇಶದಲ್ಲಿ ತೀರ್ವ ಗುಡ್ಡಕುಸಿತ, ನೀರಿನ ಸಂಪರ್ಕ ಕಡಿತ, ಮನೆಗಳಿಗೆ ಹಾನಿ, ಮನೆಯೊಳಗೆ ನೀರು ಪ್ರವೇಶ ಸ್ಥಳಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಭೇಟಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸ್ಥಳೀಯ ಇಂಜಿನಿಯರ್ ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಐವನ್ ಡಿʼಸೋಜಾರವರು ಕಳೆದ ಅನೇಕ ವರ್ಷಗಳಿಂದ ಬೊಲ್ಲೂರುಗುಡ್ಡೆ ಎಂಬಲ್ಲಿ ಡೊಡ್ಡ ಮಟ್ಟ ಗುಡ್ಡ ಕುಸಿತ ಉಂಟಾಗುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಊರಿನ ನಾಗರಿಕರು ದೂರಿದರೂ ಈ ಸಂಬಂಧ ನಗರ ಪಾಲಿಕೆ ಇಂಜಿನಿಯರ್ಗಳ ಗಮನ ಸೆಳೆದು ಕೂಡಲೇ ಸದರಿ ಸ್ಥಳಗಳಿಗೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಐವನ್ ಡಿʼಸೋಜಾ ಒತ್ತಾಯಿಸಿದ್ದಾರೆ. ಈ ಪ್ರದೇಶಗಳಿಗೆ ಭೇಟಿ ನೀಡಿ ನೀರಿನ ಕಾಲುವೆಗಳನ್ನು ಒತ್ತುವರಿ ಮಾಡಿ ಕಾಲುವೆಗಳಿಂದ ನೀರು ಹೋಗಲು ಅಸಾದ್ಯವಾಗಿದ್ದು ಇದನ್ನು ಇಂಜಿನಿಯರ್ಗಳ ಗಮನಕ್ಕೆ ತರಲಾಗಿದೆ.
ಅದೇ ರೀತಿ ಕಾಲುವೆಗಳನ್ನು ಕೂಡಲೇ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕೆಂದು ಮಾನ್ಯ ಶಾಸಕರು ಸೇರಿ ತಹಶೀಲ್ದಾರರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಬೊಲ್ಲೂರುಗುಡ್ಡೆಯಲ್ಲಿ ಮನೆಕುಸಿತ ಉಂಟಾಗಿದ್ದು ಈ ಬಗ್ಗೆ ಕೂಡಲೇ ಪರಿಹಾರ ಒದಗಿಸುವಂತೆ ಈ ಗುಡ್ಡ ಕುಸಿತದ ನಷ್ಟವನ್ನು ಭರಿಸುವಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದೇ ರೀತಿ ಇತರ ಕಡೆಗಳಲ್ಲಿ ಕೂಡ ಮನೆ ಕುಸಿತಗಳಾಗುವ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುನ್ನಚ್ಚರಿಕೆಯಾಗಿ ಯಾವುದೇ ಜೀವಹಾನಿ ಆಗದಂತೆ ಕ್ರಮಕೈಗೊಳ್ಳಬೇಕೆಂದು ರಕ್ಷಣಾ ಕಾರ್ಯವು ಪ್ರಮುಖ ಅಂಶವಾಗಿದೆ. ಎಂದು ಜಿಲ್ಲಾಧಿಕಾರಿ & ಅಯುಕ್ತರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಮತ್ತು ಏಲ್ಲಾ ಕಡೆಗಳಲ್ಲಿ ಅಧಿಕಾರಿಗಳು ಮತ್ತು ಕಾರ್ಯಪಡೆಗಳು ಕಾರ್ಯನಿರ್ವಹಿಸುತ್ತಿದ್ದಾರೆ.ಎಂದು ಜಿಲ್ಲಾಧಿಕಾರಿ ಮತ್ತು ಅಯುಕ್ತರು ಮಾಹಿತಿಯನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಣ್ಣೂರು ವಾರ್ಡ್ ಕಾಂಗ್ರೆಸ್ ಅಧ್ಯಕ್ಷರು ರಫೀಕ್, ಹಬೀಬುಲ್ಲಾ ಕಣ್ಣೂರು, ಮೊಹಮ್ಮದ್ ಸುಹೈಲ್, ಅಶ್ಫಕ್ ಮೊಹಮ್ಮದ್ ಅಶ್ರಫ್, ಇಂತಿಕಾಬ್, ಇಬ್ರಾಹಿಂ ಉಪಸ್ಥಿತಿ ಇದ್ದರು.