ಮಂಗಳೂರು:  ತಾನು ಅಡಕೆ ವ್ಯಾಪಾರಿ ಎಂದೂ  ಪಂಪ್‌ವೆಲ್ ಹಣ ಬಿದ್ದು ಹೋಗಿರುವುದಾಗಿಯೂ ಕಂಕನಾಡಿ ಪೋಲೀಸು ಠಾಣೆಗೆ ಬಂದಿದ್ದಾರೆ. ಅದನ್ನು ಕೋರ್ಟಿನಲ್ಲಿಯೇ ನಿರೂಪಿಸುವಂತೆ ಪೋಲೀಸರು ಅವರಿಗೆ ಹೇಳಿ ಕಳುಹಿಸಿರುವುದಾಗಿ ತಿಳಿದು ಬಂದಿದೆ.  ಬಂದ ವ್ಯಕ್ತಿ ಅದರಲ್ಲಿ ರೂ.‌ 10 ಲಕ್ಷ ರೂಪಾಯಿ ಇತ್ತು ಎಂದು ಹೇಳಿರುವುದಾಗಿಯೂ ವರದಿಯಾಗಿದೆ.

ನವೆಂಬರ್ 26ರ ಮುಂಜಾನೆ ಪಂಪ್‌ವೆಲ್ ಸರ್ಕಲ್‌ನಲ್ಲಿ ಶಿವರಾಜ್ ಎಂಬವರಿಗೆ ನೋಟಿನ ಕಂತೆಗಳು ದೊರೆತಿದ್ದು, ಅದನ್ನು ಅವರು ತುಕಾರಾಂ ಜೊತೆಗೆ ಹಂಚಿಕೊಂಡಿದ್ದರು.  ಮುಂದೆ ಶಿವರಾಜ್ ಬಳಿ ರೂ. 49,000 ಮತ್ತು ತುಕಾರಾಂ ಬಳಿ 2.99 ಲಕ್ಷ ಹಣ ಸಿಕ್ಕಿತ್ತು. ವಿಷಯ ಕೋರ್ಟಿಗೆ ನಿವೇದನೆಯಾಗಿದೆ. ಈಗ ವಾರಸುದಾರ ಎಂಬ ವ್ಯಕ್ತಿ ಬಂದಿರುವುದು ವಿಷಯಕ್ಕೆ ತಿರುವು ನೀಡಿದೆ.