ಅತ್ತೂರು, ಕಾರ್ಕಳ:   20-01-2024 ಸಂಜೆ ಸಂತ ಲಾರೆನ್ಸ್ ಬಾಸಿಲಿಕಾ  ಅತ್ತೂರು ಇದರ ವಾರ್ಷಿಕ ಮಹೋತ್ಸವದ ಪೂರ್ವ ತಯಾರಿಯಾಗಿ  ಭ್ರಾತತ್ವದ ಪೂಜೆ ಹಾಗೂ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ನಕ್ರೆ ಚರ್ಚಿನ ಪ್ರಧಾನ ಧರ್ಮ ಗುರು  ವಂ| ಲುವಿಸ್ ಡೆಸಾ ರವರು ಪೂಜೆಯನ್ನು ನೆರವೇರಿಸಿದರು. 

ಸಂತ ಲಾರೆನ್ಸ್ ಬಸಿಲಿಕಾದ ರೆಕ್ಟರ್ ಹಾಗೂ ಪ್ರಧಾನ ಧರ್ಮ ಗುರು ವಂ|  ಫಾದರ್ ಆಲ್ಬನ್ ಡಿಸೋಜಾ , ಸಹಾಯಕ ಧರ್ಮಗುರು  ವಂ|  ಲ್ಯಾರಿ ಪಿಂಟೋ, ಆಧ್ಯಾತ್ಮಿಕ ಧರ್ಮ ಗುರು  ವಂ| ರೋಮನ್  ಮಸ್ಕೇರೆನ್ಹಸ್, ವಂ|  ಸುನಿಲ್ ಕಪುಜಿನ್ , ವಂ|  ಮ್ಯಾಕ್ಸಿಮ್ ನಜರೆತ್ ಕಪುಜಿನ್ ಹಾಗೂ ಸಾವಿರಾರು ಭಕ್ತವೃಂದರು ಭಾಗವಹಿಸಿದರು.