ಮಂಗಳೂರು: ಬಾಬುಗುಡ್ಡೆಯಲ್ಲಿ ಅನೇಕ ವರ್ಷಗಳಿಂದ ರಿಕ್ಷಾ ನಿಲ್ದಾಣದ ಬೇಡಿಕೆ ಇದ್ದುದರಿಂದ  ಸುಸಜ್ಜಿತವಾದ ರಿಕ್ಷಾ ನಿಲ್ದಾಣವನ್ನು ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯನ್ನು ಸ್ಥಳೀಯ ನಾಯಕರಾದ  ಜಯಂತ್ ಪೂಜಾರಿಯವರು ಉದ್ಘಾಟಿಸಿದರು. ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಐವನ್ ಡಿʼಸೋಜಾರವರು ರಿಕ್ಷಾ ಚಾಲಕರು ಸಮಾಜದ ರಾಯಭಾರಿಗಳಾಗಿದ್ದು ಸಮಾಜದಲ್ಲಿ ನಡೆಯುವ ಏಲ್ಲಾ ಆಗು-ಹೋಗುಗಳಿಗೆ ತಮ್ಮದೇ ಅದ ಪಾತ್ರವಹಿಸಿದ್ಧಾರೆ. ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಸರಕಾರ ಒತ್ತು ನೀಡಿದೆ. 

ರಿಕ್ಷಾ ಚಾಲಕರಿಗೆ ಮೇಲ್ಛಾವಣಿ ಹಾಕುವುದರ ಮೂಲಕ ರಾಜ್ಯದಲ್ಲಿಯೇ 2014ರಲ್ಲಿ ಸರ್ಕಾರದ ಗಮನಕ್ಕೆ ತಂದು ವಿಧಾನಪರಿಷತ್ ನಲ್ಲಿ ಚರ್ಚೆ ಮಾಡಿದ ಫಲವಾಗಿ ಅಂದಿನ ಮಂತ್ರಿಗಳಾಗಿದ್ದ ಎಸ್ ಆರ್ ಪಾಟೀಲ್ರವರು ರಿಕ್ಷಾ ಮೇಲ್ಛಾವಣಿ ಘಟಕಕ್ಕೆ ಸನುದಾನವನ್ನು ನೀಡಬಹುದು ಎಂದೂ ಪ್ರದೇಶಾಭಿವೃದ್ದಿ ಕಾಮಗಾರಿಗೆ ಸೇರಿಸಿಕೊಳ್ಳಬಹುದು ಎಂದೂ, ಇದರಿಂದ ರಿಕ್ಷಾ ಚಾಲಕರಿಗೆ ಮೇಲ್ಛಾವಣಿ ಅಳವಡಿಸಬಹುದೆಂದು ಜಾರಿಗೆ ತರಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಜುನಾತ ಭಂಡಾರಿಯವರು ಮಾತನಾಡಿ ರಿಕ್ಷಾಚಾಲಕರು ನಮ್ಮ ರಾಯಭಾರಿಗಳಾಗಿದ್ದು ರಿಕ್ಷಾ ತಂಗುದಾಣಗಳಿಗೆ ಸರಕಾರದಿಂದ ಅನುದಾನ ಒದಗಿಸಿಕೊಡುವಂತಹುದು ಉತ್ತಮ ಕೆಲಸ ಎಂದು ನುಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ, ಮಾಜಿ ಕಾರ್ಪೋರೇಟರ್ ನಾಗೇಂದ್ರ ಕುಮಾರ್ ಜೆಪ್ಪಿನಮೊಗರು, ಅಪ್ಪಿಲತ, ಸಬಿತ ಮಿಸ್ಕಿತ್, ಸತೀಶ್ ಪೆಂಗಲ್, ಶೈಲಜಾ, ವಿಜಯ ಲಕ್ಷ್ಮಿ, ಪ್ರೇಮ್ ಬಲ್ಲಾಲ್ಬಾಗ್, ಬಾಸ್ಕರ್ ರಾವ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ ನಾಯಕರುಗಳಾದ, ಜಯಂತ್ ಪೂಜಾರಿ, ಕೀರ್ತಿರಾಜ್ ನವಾಜ್ ಜೆಪ್ಪು, ಮನೀಶ್ ಬೋಳಾರ್, ಮನುರಾಜ್, ಚಂದ್ರಹಾಸ್ ಪೂಜಾರಿ ಕೋಡಿಕಲ್, ಇಮ್ರಾನ್ ಏ.ಆರ್, ಮೀನಾ ಟೆಲ್ಲೀಸ್, ನೀತು, ವಿದ್ಯಾ ಅತ್ತಾವರ, ಪ್ರವೀಣ್ ಜೇಮ್ಸ್, ಅನಿಲ್ ರಸ್ಕಿನ, ಜೋಕಿಮ್ ಡಿಸೋಜಾ, ವಿಕ್ಟೋರಿಯಾ ಅತ್ತಾವರ್ ಉಪಸ್ಥಿತರಿದ್ದರು.