ಮಂಗಳೂರು: ಜೆಪ್ಪಿನಮೊಗರಿನಲ್ಲಿ ಪ್ರಶಾಂತ್ ಡಿʼಸೋಜಾ ಎಂಬವರು ದಿನಸಿ ಅಂಗಡಿ ನಡೆಸುತ್ತಿದ್ದು ಮಹಾನಗರ ಪಾಲಿಕೆ ವತಿಯಿಂದ ಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವನ್ನು ವಹಿಸದೇ  ಚರಂಡಿ ಕಾಮಗಾರಿ ಜೂನಿಯರ್ ಇಂಜಿನಿಯರವರ ನಿರ್ಲಕ್ಷತನದಿಂದ ಕಾಮಗಾರಿ ನಡೆಸಿರುವುದರಿಂದ ಮಳೆಯ ನೀರು ಚರಂಡಿಯಲ್ಲಿ ತುಂಬಿ ಪ್ರಶಾಂತ್ ಡಿʼಸೋಜಾರವರ ಅಂಗಡಿಯ ಬಾಗಿಲು ಮತ್ತು ಗೋಡೆಯು ಜರಿದು ಬಿದ್ದು ತುಂಬಾ ನಷ್ಟವಾಗಿದೆ. 

ಅಂಗಡಿಯಲ್ಲಿ ಪ್ರಿಜ್ಡ್ ಮತ್ತು ಶೋಕೇಸ್ ಧವಸ ಧಾನ್ಯಗಳು ಐಸ್ ಕ್ರೀಂ ಇನ್ನಿತರ ವಸ್ತುಗಳು ಹಾಳಾಗಿದ್ದು ಸುಮಾರು ಮೂರು ಲಕ್ಷದಷ್ಟು ಸಷ್ಟವಾಗಿದ್ದು ಈ ಸ್ಥಳಕ್ಕೆ ವಿಧಾನ ಪರಿಷತ್ ಶಾಸಕರಾದ  ಐವನ್ ಡಿʼಸೋಜಾರವರು ಭೇಟಿ ನೀಡಿ ಪರಿಶೀಲಿಸಿ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಈ ಕಾಮಗಾರಿಗೆ ಸಂಬಧಪಟ್ಟ ಜೂನಿಯರ್ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಕೂಡಲೇ ಈ ಕಾಮಗಾರಿಯ ನಿರ್ಲಕ್ಷತನ ಏನಿದೆ ಅದನ್ನು ಕೂಡಲೇ ಅದಕ್ಕೆ ಕ್ರಮಕೈಗೊಳ್ಳಬೇಕು ಹಾಗೂ ಇದಕ್ಕೆ ಸರಿಯಾದ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. 

ಈ ಸಂದರ್ಭದಲ್ಲಿ ಸ್ಥಳೀಯ ಮಾಜಿ ಕಾರ್ಫೋರೇಟರ್ ನಾಗೇಂದ್ರ ಕುಮಾರ್ ,ಉದಯ ಕೊಟ್ಟಾರಿ ಸ್ಥಳೀಯ ವಾರ್ಡ್ ಅಧ್ಯಕ್ಷರಾದ  ಸುಧಾಕರ್, ಪ್ರಾಣೇಶ್ ರಾವ್, ಸುರೇಶ್, ಪ್ರಶಾಂತ್, ಅಮರನಾಥ ಭಂಡಾರಿ ಮುಂತಾದವರು ಜೊತೆಗಿದ್ದರು.