ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅಂತರಾಷ್ಟ್ರೀಯ ಯೋಗ ದಿನವಾದ ಶನಿವಾರ ಜೂ. 21 ರಂದು ವಿದ್ಯಾರ್ಥಿ ವಿದ್ಯಾರ್ಥಿನೀಯರುಗಳಿಗೆ ಬೆಳಿಗ್ಗೆ 9.00 ಗಂಟೆಗೆ ರಮಾರಾಣಿ ಶೋಧ ಸಂಸ್ಥಾನದ ಭಟ್ಟಾರಕ ಸಭಾಂಗಣದಲ್ಲಿ ವಿವಿಧ ಸನಾ,ಪ್ರಾಣಯಾಮ ಕಲಿಸಿದರು. ಸ್ವಾಮೀಜಿ ಪರ್ವತ ಆಸನ, ಮಯೂರ ಆಸನ, ಸರ್ವಾoಗ ಆಸನ, ಆಸನಗಳ ರಾಜಶಿರ್ಷಾ ಸನಾ ವನ್ನು ಮಾಡಿ ತೋರಿಸಿ ಅದರ ಪ್ರಯೋಜನ ತಿಳಿಸಿದರು.
ಯೋಗ ಧರ್ಮ ಭಕ್ತಿ,ಕರ್ಮ, ರಾಜ, ಧ್ಯಾನ ಯೋಗ ಆತ್ಮ ನನ್ನು ಮಹಾತ್ಮ ನನ್ನಾಗಿ ಮಾಡುದು ಪರಮಾತ್ಮ ನ ಆನಂದ ನೀಡುದು ತೃಪ್ತಿಕರ ಜೀವನವನ್ನು ನಡೆಸಲು ಭಾವನಾತ್ಮಕ ಯೋಗಕ್ಷೇಮವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಸ್ವಯಂ ಅರಿವು ಮತ್ತು ಆತ್ಮಾವಲೋಕನವನ್ನು ಪ್ರೋತ್ಸಾಹಿಸುತ್ತದೆ, .
ಮಾನಸಿಕ ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಅರಿವಿನ ಕಾರ್ಯವನ್ನು ಹೆಚ್ಚಿಸಲು, ಉದ್ಯೋಗಿಗಳಿಗೆ ಒತ್ತಡ ಕಡಿಮೆಗೊಳ್ಳಲು ಸಹಾಯ ಮಾಡುತ್ತದೆ ಎಂದು ನುಡಿದರು.
ಸ್ವಸ್ತಿಶ್ರೀ ಕಾಲೇಜಿನ ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕರಾದ ಹಿತೇಶ್, ಸುಜಾತಾ ಉಪಸ್ಥಿತರಿದ್ದರು.