ನೂರಾರು ಲೋಪಗಳು, ಪರಿಗಣಿಸದ ಆರೋಪಗಳ ನಡುವೆ ನಡೆದ ಕೆಎಂಸಿ- ಕರ್ನಾಟಕ ವೈದ್ಯಕೀಯ ಪರಿಷತ್ತಿನ ಚುನಾವಣೆಯನ್ನು ರದ್ದುಗೊಳಿಸಿದ ಹೈಕೋರ್ಟ್ ಆರು ತಿಂಗಳ ಒಳಗೆ ಹೊಸ ‌ಚುನಾವಣೆ ನಡೆಸುವಂತೆ ಆದೇಶಿಸಿತು.

ಗಚಿನಮನಿ ನಾಗನಾಥ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ತೀರ್ಪು ನೀಡಿತು. ಅಲ್ಲದೆ ಸಹಕಾರಿ ಸಂಘಗಳ ಜಂಟಿ ರಿಜಿಸ್ಟ್ರಾರ್ ಡಿ. ಪಾಂಡುರಂಗ ಗರಗ್ ಅವರ ವಿರುದ್ಧ ಕ್ರಮ ಜರುಗಿಸುವಂತೆಯೂ ಆದೇಶ ನೀಡಿತು.