ಮಂಗಳೂರು: ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಸಕಾಲ ಸಮಾಲೋಚಕರ ಹುದ್ದೆಗೆ  ಮಾರ್ಚ್ 20 ರ ಒಳಗಡೆ ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಮಾರ್ಚ್ 27ರಂದು  11 ಗಂಟೆಗೆ ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಮಟ್ಟದ ಸಕಾಲ ಸಮಾಲೋಚಕರ ಆಯ್ಕೆ ಸಮಿತಿಯ  ಮುಂದೆ ಜಿಲ್ಲಾಧಿಕಾರಿ ಕಚೇರಿ ಮೂರನೇ ಮಹಡಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಕಚೇರಿ  ಪ್ರಕಟಣೆ ತಿಳಿಸಿದೆ.