ಕಲಬುರಗಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಡಾ. ರಾಘವೇಂದ್ರ ಚಿಂಚನಸೂರ ಅವರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ, ನೋಟಾ ಚಲಾಯಿಸಿ ಬುದ್ಧಿ ಕಲಿಸಿ ಎಂದು ಕರೆ ನೀಡಿದ್ದಾರೆ.
ಬಿಜೆಪಿ ಗೆಲ್ಲಿಸಲು ನಾವು ಬೇಕು, ಗೆದ್ದ ಮೇಲೆ ನಾಯಕರದೇ ಗತ್ತು. ಕಲಬುರಗಿ ಜಿಲ್ಲೆಗೆ ಮಂತ್ರಿ ಸ್ಥಾನ ಏಕೆ ನೀಡಿಲ್ಲ. ನಿಮಗೆ ಸುತ್ತಲು ಕೋವಿಡ್ ಇಲ್ಲ, ಕಾರ್ಯಕರ್ತರನ್ನು ಭೇಟಿಯಾಗಲು ಕೊರೋನಾ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿರುವ ರಾಘವೇಂದ್ರ ಅವರು ನೋಟಾ ಚಲಾಯಿಸಿ ಇವರಿಗೆ ಬುದ್ಧಿ ಕಲಿಸಿ ಎಂದಿದ್ದಾರೆ.
ಇನ್ನೆರಡು ದಿನಗಳಲ್ಲಿ ಕಲಬುರಗಿ ಪಾಲಿಕೆಗೆ ಮತದಾನ ನಡೆಯಲಿದೆ.