ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮವನ್ನು ಲೋಕದಾದ್ಯಂತ ಮಾನವಕುಲದ ಜೀವನಕ್ಕೆತೊಂದರೆ ಮಾಡುವ ಕೊರೋನ ಸಂಬಂಧಿತ ಕೆಟ್ಟ ಕ್ರಿಮಿಗಳನ್ನು ದೂರಮಾಡಲು ಭಗವಾನ್ ಮಹಾ ವಿಷ್ಣುವನ್ನು ಪ್ರಾರ್ಥಿಸಿ ನೆರವೇರಿಸಲಾಯಿತು.

ಅಷ್ಟು ಋಷಿಗಳು ಹಿಂದೆಕ್ರಿಮಿರೂಪದ ಮಹಾಮಾರಿಯನ್ನುತಮ್ಮತಪೋ ಮಹಿಮೆಯಿಂದದೂರಮಾಡಿ ನಾಶವಾಗುವ ಹಂತದಲ್ಲಿರುವ ಈ ಲೋಕದ ಜೀವರಾಶಿಯನ್ನು ರಕ್ಷಿಸಲು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.ನಮ್ಮನ್ನುಅಂತಹ ಮಹಾಮಾರಿಯಿಂದ ರಕ್ಷಿಸಿರಿ ಎಂಬುದಾಗಿ ಪ್ರಾರ್ಥಿಸುತ್ತಿದ್ದರು.ಆ ಮಂತ್ರವನ್ನು ಸಹಸ್ರಬಾರಿ ಪಠಿಸಿ ತಿಲ ಮತ್ತುತುಪ್ಪವನ್ನು ಸಮರ್ಪಿಸಿ ನೆರವೇರಿಸಲಾಯಿತು.

ಈ ಹೋಮವನ್ನು ಶ್ರೀ ವೆಂಕಟ್ರಮಣ ಅಡಿಗ, ಧರ್ಮಸ್ಥಳ ಇವರ ನೇತೃತ್ವದಲ್ಲಿಶ್ರೀಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದು ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ವಿ.ಹೆಗ್ಗಡೆಯವರು ಭಾಗವಹಿಸಿದ್ದರು.