ಹಾಸನದ ಪಾಂಡುರಂಗ ಗೌಡ ಮತ್ತು ಶ್ರೀನಿವಾಸ ಮೂರ್ತಿ ತಾವು ಕಲಿತ ಕಾಲೇಜಿಗೆ ಕೊಟ್ಟ ಕೊಡುಗೆ ಏನು ಅಂದ್ರೆ ಹಸಿರು ಉಡುಗೆ...! ಸಾಮಾನ್ಯವಾಗಿ ಕಲಿತ ಕಾಲೇಜಿನ ಹಳೆ ವಿದ್ಯಾರ್ಥಿಗಳು ಉಡುಗೆ ಕೊಡುವುದು ಕಾಲೇಜಿನ ಪೀಠೋಪಕರಣಗಳು, ಕಪಾಟು, ಕಟ್ಟಡ, ಕಂಪ್ಯೂಟರ್.....ಇತ್ಯಾದಿ. ಆದರೆ ಇವರಿಬ್ಬರೂ ( 1967 ರಿಂದ 72 ರವರೆಗೆ ) ಹಾಸನದ ಮಲ್ನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತಿದ್ದು ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ತಾವು ಕಲಿತ ಕಾಲೇಜಿಗೆ ಕೊಡುಗೆಯಾಗಿ ನೀಡಲಿರುವುದು ಕದಂಬ ವನ...ಕಾಲೇಜಿನ ಸುತ್ತಮುತ್ತ 100 ಕದಂಬ ಗಿಡಗಳನ್ನು ನೆಟ್ಟು ಹಸಿರು ಕಂಗೊಳಿಸಬೇಕು ಮತ್ತು ಕಾಲೇಜಿನ ಪರಿಸರ ಸದಾ ನಿಸರ್ಗ ಸಹಜ ವಾತಾವರಣ ನಿರ್ಮಾಣ ಆಗಬೇಕು ಎಂಬುದು ಇವರ ಅಭಿಲಾಷೆ. 

ನಿನ್ನೆ ವೃಕ್ಷ ತಜ್ಞ ಮಾಧವ್ ಉಳ್ಳಾಲ್ ಜೊತೆ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿಗೆ ಹೋಗಿ ಪಾಂಡುರಂಗ ಗೌಡ ಮತ್ತು ಶ್ರೀನಿವಾಸ ಮೂರ್ತಿ ಜೊತೆ ಸೇರಿ ಗಿಡ ನೆಡು ವ ಜಾಗ , ಅಲ್ಲಿನ ಮಣ್ಣು, ವಾತಾವರಣ ಇತ್ಯಾದಿ ಸಮೀಕ್ಷೆ ಮಾಡಿದಾಗ ಎಲ್ಲವೂ ಪೂರಕ ವಾಗಿ ಇರುವ ಕಾರಣ ಕದಂಬ ವನದ ಪರಿಕಲ್ಪನೆಗೆ ಪೀಠಿಕೆ ಎಂಬ ಹೆಜ್ಜೆ ಇಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಂತ್ ಮತ್ತು ಇನ್ನಿತರ ಉಪನ್ಯಾಸಕರ ಬೆಂಬಲ ಕೂಡಾ ಇರುವ ಕಾರಣ.

 ಈ ಒಂದು ಯೋಜನೆ ಅಲ್ಲಿನ ವಿದ್ಯಾರ್ಥಿಗಳಿಗೆ ನಿಸರ್ಗ ಕಾಳಜಿ ಬೆಳೆಯುವಂತೆ ಪ್ರೇರಣೆ ಆಗಬಹುದು.

Dinesh Holla (Environmentalist )