ಬಂಟ್ವಾಳ: ಸಾಹಿತಿ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜಸೇವಕ, ಸಹಕಾರ ಧುರೀಣ, ತುಳು ಬರಹಗಾರ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬ ಊರಿನ ಹತ್ತಿರದ `ಏರ್ಯ' ಎಂಬ ಸ್ಥಳ. `ಏರ್ಯಬೀಡು' ಎಂಬ ಮನೆತನದಲ್ಲಿ ಹುಟ್ಟಿದರು. ಪ್ರೊ. ಕು.ಶಿ.ಹರಿದಾಸ ಭಟ್ಟರು ಏರ್ಯರ ಕುರಿತಾಗಿ ಹೀಗೆ ಹೇಳಿದ್ದಾರೆ:`ಏರ್ಯರವರ ಏರಿಯಾ ಯಾವುದೆಂದು ಹೇಳಬಲ್ಲವರು ಯಾರು? ಅವರು ಯಾವ ಏರಿಯಾಕ್ಕೆ ಸಲ್ಲದವರೆಂದು ಹೇಳಲಿ? ಇಡಿಯ ತುಳುನಾಡು-ದಕ್ಷಿಣ ಕನ್ನಡ-ಉಡುಪಿ ಕರಾವಳಿ ಎಂಬ ಮಿತಿಯನ್ನು ದಾಟಿ, ಅಖಿಲ ಭಾರತವೂ ಅವರ ಏರಿಯಾವಾಗಿದೆ.' `ಏರ್ಯ'ಎಂಬ ಗ್ರಂಥವು ಏರ್ಯ ಲಕ್ಶ್ಮೀನಾರಾಯಣ ಆಳ್ವರ ಅಭಿನಂದನ ಗ್ರಂಥ.
ಏರ್ಯರ ಹುಟ್ಟು ಮತ್ತು ಬಾಲ್ಯಸಂಪಾದಿಸಿ
`ಏರ್ಯ ಬೀಡಿನ ಕುಟುಂಬವು ತುಳುನಾಡಿನ ಮಾತೃಮೂಲ ಪದ್ಧತಿ ಅಥವಾ ಅಳಿಯ ಕಟ್ಟಿನ ಕ್ರಮವನ್ನು ಅನುಸರಿಸುವ ಪರಂಪರೆಯನ್ನುಳ್ಳದ್ದು. ಈ ಸಮಾಜದ ಏರ್ಯಬೀಡು ಮನೆತನದ ಮೂಲ ತಾಯಿ ಮೈರಕ್ಕೆ ಪೂಂಜೆದಿ ಎಂಬವರು. ಅವರ ಮಗಳು ಸೋಮಕ್ಕ ಎಂಬವರೇ ಏರ್ಯರ ತಾಯಿ. ಆರು ಗಂಡು ಮಕ್ಕಳೊಂದಿಗೆ ಜನಿಸಿದ ಸೋಮಕ್ಕ ಮಾತ್ರ ಈ ಮನೆಯ ಹೆಣ್ಣು ಸಂತತಿ. ಆ ಮನೆಯ ಮುಂದಿನ ಸಂತತಿ ಆಕೆಯ ಮಕ್ಕಳಿಂದಲೇ ಮುಂದುವ್ರಿಯಬೇಕಾದುದು ಮಾತೃಮೂಲ ಪದ್ಧತಿಯ ನಿಯಮ. ಆಕೆಯನ್ನು ಏರ್ಯಬೀಡಿನಿಂದ ಅನತಿ ದೂರದ ಮಾವಂತೂರು ಕುಟುಂಬದ ಸುಬ್ಬಯ್ಯ ಆಳ್ವರಿಗೆ ಮದುವೆ ಮಾಡಿಕೊಟ್ಟರು. ಇದು ಸುಮಾರು ೧೯೧೫ರ ಹಿಂದೆ ಮುಂದೆ. ಈ ದಂಪತಿಗೆ ಮೊದಲು ಮೂರು ಹೆಣ್ಣು ಮಕ್ಕಳು, ಜನಿಸಿದರು. ೧೯-೩-೧೯೨೬ರಂದು ಲಕ್ಶ್ಮೀನಾರಾಯಣ ಆಳ್ವರು ಜನಿಸಿದರು.
ಏರ್ಯರು ಹುಟ್ಟಿ ಬೆಳೆದ ಕಾಲವೆಂದರೆ ಸ್ವಾತಂತ್ರ್ಯಕ್ಕಾಗಿ ಚಳುವಳಿಗಳು ಜೋರಾಗಿ ನಡೆಯುತ್ತಿದ್ದ್ಸ ಸಮಯ. ಆದುದರಿಂದಲೇ ಸ್ವಾತಂತ್ರ್ಯಪೂರ್ವದ ಆದರ್ಶಗಳು ಅವರ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪಾತ್ರವಹಿಸಿವೆ. ಏರ್ಯರು ನೇರವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಚಳುವಳಿಯಲಿಲ್ಲದಿದ್ದರೂ ಚಳುವಳಿಗಾರರ ಉತ್ಸಾಹ ಅವರ ರಕ್ತದಲ್ಲಿತ್ತು. `ಭಾರತಬಿಟ್ಟು ತೊಲಗಿ' ಎಂಬ ಗಾಂಧೀಜಿಯವರು ಕರೆಯನ್ನು ದೇಶಬಾಂಧವರಿಗೆ ನೀಡಿ ಚಳುವಳಿಯನ್ನು ಅಂತಿಮ ಹಂತಕ್ಕೆ ನಡೆಸುತ್ತಿದ್ದಾಗ ಏರ್ಯರು ವಿದ್ಯಾರ್ಥಿ. ಅಂದಿನ ಆ ದಿನಗಳ ನೆನಪನ್ನು ಅವರು ಮಾಡಿಕೊಂಡಿರುವುದು ಹೀಗಿದೆ:``ನಾನು ಆರನೆಯ ತರಗತಿಯಲ್ಲಿ ಕಲಿಯುತ್ತಿದ್ದಾಗ ೧೯೪೨ರಲ್ಲಿ ದೇಶದಲ್ಲಿ ಕ್ವಿಟ್ ಇಂಡಿಯಾ ಚಳವಳಿನಡೆಯಿತು. ಆ ದಿನಗಳಲ್ಲಿ ಎರಡು ದಿನಗಳ ಕಾಲ ಶಾಲೆಗೆ ಬಹಿಷ್ಕಾರ ಹಾಕಿ ಮಾರ್ಗದಲ್ಲಿ ನಿಂತು `ಭಾರತ್ ಮಾತಾಕಿ ಜೈ' ಎಂದು` ಕ್ವಿಟ್ ಇಂಡಿಯಾ' ಮಹಾತ್ಮಾ ಗಂಧಿಜೀಕಿ ಜೈ' ಎಂದು ಬೊಬ್ಬೆ ಹಾಕಿದ್ದ ನೆನಪು. ಇಂದೂ ಹಚ್ಚ ಹಸುರಾಗಿ ಅಚ್ಚಳಿಯದೇ ನಿಂತಿದೆ. ಆ ದಿನಗಳಲ್ಲಿ ಹೆಚ್ಚಿನ ಅಧ್ಯಾಪಕರು ನಮ್ಮನ್ನು ಕಂಡು ಪ್ರೋತ್ಸಾಹದ ನಸು ನಗು ನಕ್ಕು ಶಾಲೆಯೆಡೆಗೆ ಹೋಗುತ್ತಿದ್ದುದು ನಮಗೆ ಉತ್ಸಾಹದಾಯಿಯಾಗಿತ್ತು. ಎರಡು ದಿನಗಳ ಬಳಿಕ ನಮ್ಮ ಚಳುವಳಿ ಕೊನೆಗೊಂಡು ಯಥಾಪ್ರಕಾರ ನಾವು ಕ್ಲಾಸುಗಳಿಗೆ ಹಾಜರಾದೆವು."
ಶಾಲಾ ದಿನಗಳುಸಂಪಾದಿಸಿ
ಏರ್ಯ ಬೀಡಿನಿಂದ ಸುಮಾರು ಎರಡು ಕಿಲೋಮೀತರ್ ದೂರದಲ್ಲಿ ಬಂಟ್ವಾಳದ ಪೇಟೆ. ಅಲ್ಲಿಯ ಬೋರ್ಡ್ ಎಲೆಮೆಂಟರಿ ಶಾಲೆಯಲ್ಲಿ ಮತ್ತು ವೆಂಕಟರಮಣ ಸ್ವಾಮಿ ಹೈಸ್ಕೂಲಿನಲ್ಲಿ ಹತ್ತನೆಯ ತರಗತಿಯವರೆಗೆ ಕಲಿತರು. ಏರ್ಯರು ಔಪಚಾರಿಕ ಶಿಕ್ಷಣ ಮುಂದುವರಿಯಲಿಲ್ಲ. ಬಂಟ್ವಾಳದಲ್ಲಿ ಆರನೆಯ ತರಗತಿಯಲ್ಲಿರುವಾಗಲೇ ಓದಿನ ಆಸಕ್ತಿ ಬೆಳೆದಿತ್ತು. ಮೊದಮೊದಲಿಗೆ ಕತೆಗಳು, ಪತ್ತೇದಾರಿ ಕಾದಂಬರಿಗಳು, ಕಾದಂಬರಿಗಳು -ಹೀಗೆ ಮುಂದುವರಿದು ಗಂಭೀರ ಗ್ರಂಥಾಲಯದ ಈ ಓದು ಹಿನ್ನೆಲೆಯಾಯಿತು. ನಿರಂತರವಾಗಿ ಓದುವ ಹವ್ಯಾಸಕ್ಕೆ ಬಾಲ್ಯವಿದ್ಯಾಭ್ಯಾಸದಲ್ಲಿಯೇ ಬೀಜಾಂಕುರವಾಗಿತ್ತು. ಕನ್ನಡದೊಂದಿಗೆ ಹಿಂದಿಯನ್ನು ಒಂದಿಷ್ಟು ಕಲಿತು ಏರ್ಯರು ರಾಷ್ಟ್ರಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದೆ ಏರ್ಯರ ಭಾವ ಹಿರಿಯಡಕದ ಡಾ. ಬಿ.ಚಂದಯ್ಯ ಹೆಗ್ಡೆಯವರ ಮಿತ್ರ ಇಂಗ್ಲಿಷ್ ಅಧ್ಯಾಪಕ ರಘುನಾಥ ಹೆಗ್ಡೆಯವರ್೫ಅ ಜೊತೆಗೆ ಅಂದಿನ ಮಣಿಪಾಲದಲ್ಲಿ ಅವರೊಡನಿದ್ದು ಶೇಕ್ಸಪಿಯರ್ ಮತ್ತು ರವೀಂದ್ರನಾಥ ಟಾಗೋರರ ಗ್ರಂಥಗಳನ್ನು ಇಂಗ್ಲಿಷ್ ನಲ್ಲಿ ಅಧ್ಯಯನ ಮಾಡಿದರು. ಮುಂದೆ ಗುರುಗಳಾಗಿ ದೊರೆತವರು ಸೇಡಿಯಾಪು ಕೃಷ್ಣ ಭಟ್ಟರು. ಅವರೇ ಏರ್ಯರ ಸಾಹಿತ್ಯಾಭಿರುಚಿಯನ್ನು ಬೆಳೆಸಿದವರು.ಏರ್ಯರ ಸಾಹಿತ್ಯಾಭಿರುಚಿ ಮೂಡಿ ಬೆಳೆಯಲು ಅವರ ತಂದ್ಯವರ ಪುರಾಣ ಪ್ರವಚನ ಒಂದು ಕಾರಣ. ತಂದೆ ಸುಬ್ಬಯ್ಯ ಆಳ್ವರು ನಡುಗನ್ನಡದ ತೊರವೆ ರಾಮಾಯಣ, ಜೈಮಿನಿ ಭಾರತ, ಕನ್ನಡ ಭಾಗವತ ಗ್ರಂಥಗಳನ್ನು ಗುರು ಮುಖೇನ ಅಧ್ಯಯನ ಮಾಡಿ ಪಾಂಡಿತ್ಯಗಳಿಸಿದ್ದರು. ಈ ಗ್ರಂಥಗಳನ್ನು ಓದಿ ಅವರು ಕನ್ನಡ, ತುಳು ಭಾಷೆಗಳಲ್ಲಿ ವಿವರಣೆ ಮಾಡುತ್ತಿದ್ದರು. ಸುಬ್ಬಯ್ಯ ಆಳ್ವರು ಮಕ್ಕಳಿಗೆ ಗಮಕ ಕಲಿಸಿದರು.
*ಕೃತಿಗಳು:*
ಮೊದಲ ಮಳೆ
ನೂರರ ನೆನಪು
ಪರಿಚಯ
ಶ್ರೀರಾಮಾಶ್ವಮೇಧದ ರಸತರಂಗಗಳು
ಸ್ನೇಹಸೇತು
ಪತ್ರ ಸಾಹಿತ್ಯಸಂಪಾದಿಸಿ
ಪತ್ರಾವಳಿ