ದಕ್ಷಿಣ ಕನ್ನಡ:- ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಲೆ ರಸ್ತೆ ಕಾಂಕ್ರಿಟೀಕರಣಕ್ಕೆ ಸುಮಾರು  5 ಲಕ್ಷ  ವೆಚ್ಚದ ಅನುದಾನವನ್ನು ಮಾಜಿ ಸಚಿವರು ಒದಗಿಸಿದ್ದು  ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆ ಇವರ 1 ಲಕ್ಷ ಅನುದಾನದ ಈ  ರಸ್ತೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ  ಮಂಜುಳಾ ಮಾಧವ ಮಾವೆ,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,  ಜಯಂತಿ ಶೆಟ್ಟಿ,ಹರೀಶ್ ರೈ ಕಲ್ಮಲೆ, ವಿಠ್ಠಲ್ ರೈ ಕಲ್ಮಲೆ, ಮಂಜಪ್ಪ ಗೌಡ, ಕೃಷ್ಣಪ್ಪ ಸಪಲ್ಯ ಕಲ್ಮಲೆ ಮತ್ತು ಕಲ್ಮಲೆ ನಾಗರೀಕರು ಉಪಸ್ಥಿತರಿದ್ದರು.