ಉಡುಪಿ,(ಡಿಸೆಂಬರ್ 8): ಉಡುಪಿಯ ಉಪ್ಪೂರು ಕೊಳಲಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೋಮಾ, ಬಿಇ ಪಾಸಾದ ಅಭ್ಯರ್ಥಿಗಳಿಂದ ಸಿಎನ್ಸಿ ಟೆಕ್ನಾಲಜಿಸ್ಟ್, ಮಾಸ್ಟರ್ ಇನ್ ಸಿಎನ್ಸಿ, ಟರ್ನರ್, ಮಿಲ್ಲರ್ ಮತ್ತು ಕ್ಯಾಡ್-ಕ್ಯಾಮ್ಸ್ಪೆಷಾಲಿಸ್ಟ್ ಕೋರ್ಸ್ಗಳ ಉಚಿತ ತಾಂತ್ರಿಕ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2950101, 9880510585 ಸಂಪರ್ಕಿಸುವAತೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.