ಪಿಎಸ್‌ಐ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಪಾಸಾಗಿದ್ದೇವೆ ಎಂದು ಕೆಲವರು ಪ್ರಧಾನಿ ಮೋದಿಯವರಿಗೆ ರಕ್ತದಲ್ಲಿ ಕಾಗದ ಬರೆದು ನ್ಯಾಯ ಕೇಳಿದ್ದಾರೆ.

ಪರೀಕ್ಷೆಯಲ್ಲಿ ಅಕ್ರಮ ಎಸಗಿದವರನ್ನು ಜೈಲಿಗೆ ಹಾಕಿ. ಓದಿ ಪಾಸಾದವರಿಗೆ ನ್ಯಾಯ ಕೊಡಿಸಿ, ಇಲ್ಲದಿದ್ದರೆ ನಾವು ಉಗ್ರರಾಗಬೇಕಷ್ಟೆ ಎಂದು ಪತ್ರದಲ್ಲಿ ಹೇಳಲಾಗಿದೆ.

2021ರ ಎಫ್‌ಡಿಎ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ನೇಮಕಾತಿ ವಿಷಯದಲ್ಲಿ ಸೂಕ್ತ ತನಿಖೆ ಅಗತ್ಯ ಎಂದು ನೊಂದವರ ಈ ಕಾಗದ ಹೇಳಿದೆ.