ಮೂಡುಬಿದಿರೆ: ಪುತ್ತೂರಿನ ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ಮೂಡುಬಿದಿರೆಯ ಲಿಯೋ ಕ್ಲಬ್, ಲಯನ್ಸ್ ಕ್ಲಬ್, ಪವರ್ ಫ್ರೆಂಡ್ಸ್ ಮತ್ತು ಸಮಾಜ ಮಂದಿರದ ಆಶ್ರಯದಲ್ಲಿ ನಡೆದ ಒಂದು ದಿನದ ಬೃಹತ್ ಆಧಾರ್ ನೋಂದಣಿ ತಿದ್ದುಪಡಿ ಶಿಬಿರದಲ್ಲಿ ಆಧಾರ್ ನೋಂದಣಿ ತಿದ್ದುಪಡಿ ಮಾಡಿಕೊಂಡವರು 642 ಮಂದಿ, ಸಮೂಹ ಅಪಘಾತ ವಿಮೆ ಮಾಡಿಸಿಕೊಂಡವರು 57 ಮಂದಿ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಅಕೌಂಟ್ ತೆರೆದವರು 43 ಮಂದಿ, ಆರ್ ಟಿ ಸಿ ಗೆ ಆಧಾರ್ ಜೋಡಣೆಗೈದವರು 33 ಮಂದಿ, ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡವರು 195 ಮಂದಿ, ಹೊಸ ವೋಟರ್ ಐಡಿ ಕಾರ್ಡ್ ಮತ್ತು ತಿದ್ದುಪಡಿ ಗೈದವರು 83 ಮಂದಿ, ಇ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಿದವರು 45 ಮಂದಿ, ಹೊಸ ಪಾನ್ ಕಾರ್ಡ್ ಮತ್ತು ತಿದ್ದುಪಡಿ ಮಾಡಿಕೊಂಡವರು 41 ಮಂದಿ, ಹೊಸ ಮತ್ತು ನವೀಕರಣ ಪಾಸ್ಪೋರ್ಟ್ ಮಾಡಿಸಿಕೊಂಡವರು 12 ಮಂದಿ, ಸಿ ಎಸ್ ಸಿ ಸೇವಾ ಸೌಲಭ್ಯ ಪಡೆದವರು 38 ಮಂದಿ, ಆಧಾರ್ ಪಾನ್ ಕಾರ್ಡ್ ಜೋಡಿಸಿಕೊಂಡವರು 11 ಮಂದಿ, ಉಚಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡವರು 293 ಮಂದಿ, ಹೀಗೆ ಒಟ್ಟಾರೆ ಇಡೀ ದಿನದ ಶಿಬಿರದ ಫಲಾನುಭವಿಗಳಾದವರು 1493 ಮಂದಿ.
ಈ ಮೇಲಿನ ಎಲ್ಲ ಕಾರ್ಯಗಳಿಗೆ ಶಿಬಿರದಲ್ಲಿ ಸಹಕರಿಸಿದ ಅಂಚೆಯ ಸಿಬ್ಬಂದಿಗಳು ಮೂಡುಬಿದಿರೆಯ ವಿಶ್ವನಾಥ, ಅರುಣಾಕ್ಷಿ, ಗಣೇಶ ಗೌಡ, ಭವಾನಿ ಶಂಕರ್, ಬಾಬು ಎಚ್. ಬೆಳುವಾಯಿಯ ಹರೀಶ್, ಕಾರ್ಕಳದ ಸಚಿನ್, ಬಜಗೋಳಿಯ ಸುಪ್ರೀತಾ, ಶಿರ್ಥಾಡಿಯ ಚಂದ್ರು ಪೊವರ್, ಜೋಡು ಮಾರ್ಗದ ಪ್ರಜ್ವಲ್, ಬಂಟ್ವಾಳದ ವಿದ್ಯಾ, ಮಾಣಿಯ ಹರ್ಷಿತ್, ಬೆಳ್ತಂಗಡಿಯ ಶಿವಾನಂದ, ಕೊಯೂರಿನ ಸಂತೃಪ್ತಿ, ಕಾಶಿಪಟ್ಟಣದ ಉಮಾಶ್ರೀ, ಅಲಂಕಾರಿನ ಸುಶ್ಮಿತಾ, ಅಶ್ವತ್ಥಪುರದ ಶಾಮಸುಂದರ ರಾವ್, ಹೊಸಬೆಟ್ಟಿನ ರಾಚಲ್, ಸಂಪಿಗೆಯ ಯಶೋಧ, ಪೆರ್ಮನ್ನಿನ ಗುರುಪ್ರಸಾದ್, ಧರೆಗುಡ್ಡೆಯ ಭರತೇಶ, ಪಡುಮಾರ್ನಾಡಿನ ಪ್ರತಿಭಾ ಮೂಡು ಮಾರ್ನಾಡಿನ ವಂದಿತ ಇವರುಗಳು.
ಇಡೀ ಒಂದು ದಿನ ನಡೆದ ಶಿಬಿರದ ಎಲ್ಲ ವ್ಯವಸ್ಥೆಗಳನ್ನು ಮಾಡಿದವರು ಪುತ್ತೂರಿನ ಮಾರುಕಟ್ಟೆ ವ್ಯವಸ್ಥಾಪಕರಾದ ಗುರುಪ್ರಸಾದ್ ಕೆ ಎಸ್ ಹಾಗೂ ನೂತನ್ ಬಂಗೇರ, ಕಾರ್ಕಳದ ಪ್ರಕಾಶ್ ಮತ್ತು ಬಂಟ್ವಾಳದ ಕೇಶವ ಪೊಳಲಿ ಅವರುಗಳು. ವರದಿ ರಾಯಿ ರಾಜ ಕುಮಾರ್ ಮೂಡುಬಿದಿರೆ.