ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ : ಕಡಂದಲೆ ಗ್ರಾಮದ ವಿದ್ಯಾಗಿರಿ ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಶನಿವಾರ  ವನಮಹೋತ್ಸವ ಕಾರ್ಯಕ್ರಮ ನಡೆಯಿತು . 

ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ  ನೀಡಿದರು . 

ಮಂಗಳೂರು ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ವಲಯದ  ಮೂಡುಬಿದಿರೆ ಘಟಕದ ಉಪ ವಲಯರಣ್ಯಾಧಿಕಾರಿ ಆನಂದ್ ,  ಮೂಡುಬಿದಿರೆ ವಲಯದ ಗಸ್ತು ಅರಣ್ಯ ಪಾಲಕರು ಚಂದ್ರಶೇಖರ್ ,  ರಾಜೇಶ್ ಕೆ, ಅರಣ್ಯ ವೀಕ್ಷಕರಾದ ರಂಜನ್ , ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಣೀತಾ ನಾಗೇಶ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್  ಪೂಜಾರಿ ಪೂಪಾಡಿಕಲ್ಲು, ಮುಖ್ಯ ಶಿಕ್ವಕಿ ಪ್ರತಿಭಾ ಎಂ.ಪಿ , ಶಿಕ್ಷಕರಾದ ಸತೀಶ್ ಶೆಟ್ಟಿ , ಪೌಲಿನ್ ಪಿಂಟೋ , ಸುಮನಾ ಎಚ್.ಸಿ., ಅಂಗನವಾಡಿ  ಕಾರ್ಯಕರ್ತೆ ಬೆನೆಡಿಕ್ಟ್ ದಾಂತಿಸ್ ಉಪಸ್ಥಿತರಿದ್ದರು.