ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ : ಕಡಂದಲೆ ಗ್ರಾಮದ ವಿದ್ಯಾಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಶನಿವಾರ ವನಮಹೋತ್ಸವ ಕಾರ್ಯಕ್ರಮ ನಡೆಯಿತು .
ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ಮಂಗಳೂರು ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ವಲಯದ ಮೂಡುಬಿದಿರೆ ಘಟಕದ ಉಪ ವಲಯರಣ್ಯಾಧಿಕಾರಿ ಆನಂದ್ , ಮೂಡುಬಿದಿರೆ ವಲಯದ ಗಸ್ತು ಅರಣ್ಯ ಪಾಲಕರು ಚಂದ್ರಶೇಖರ್ , ರಾಜೇಶ್ ಕೆ, ಅರಣ್ಯ ವೀಕ್ಷಕರಾದ ರಂಜನ್ , ಎಸ್ಡಿಎಂಸಿ ಉಪಾಧ್ಯಕ್ಷ ಪ್ರಣೀತಾ ನಾಗೇಶ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಪೂಜಾರಿ ಪೂಪಾಡಿಕಲ್ಲು, ಮುಖ್ಯ ಶಿಕ್ವಕಿ ಪ್ರತಿಭಾ ಎಂ.ಪಿ , ಶಿಕ್ಷಕರಾದ ಸತೀಶ್ ಶೆಟ್ಟಿ , ಪೌಲಿನ್ ಪಿಂಟೋ , ಸುಮನಾ ಎಚ್.ಸಿ., ಅಂಗನವಾಡಿ ಕಾರ್ಯಕರ್ತೆ ಬೆನೆಡಿಕ್ಟ್ ದಾಂತಿಸ್ ಉಪಸ್ಥಿತರಿದ್ದರು.