ಶಕ್ತಿನಗರ, ಮಂಗಳೂರು: ವಿದ್ಯಾಕಲ್ಪಕ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅಯ್ಕೆಯಾಗಿರುವ ವಿದ್ಯಾರ್ಥಿಗಳಿಗಾಗಿ 'ಕ್ಷಿತಿಜ' ಹೆಸರಿನ ಮೂರು ದಿನಗಳ ಉಚಿತ ಕೌಶಲ್ಯ ತರಬೇತಿ ಶಿಬಿರ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ದೀಪ ಪ್ರಜ್ವಲನೆ ಮಾಡಿ ಶಿಬಿರ ಉದ್ಗಾಟಿಸಿದ ಪ್ರಸಿದ್ಧ ಆರ್ಥಿಕ ಸಲಹೆಗಾರ ಸಿಎ ಅನಂತ ಶೆಣೈ ಶಿಬಿರಾರ್ಥಿಗಳಿಗೆ ತಮ್ಮ ವಿದೇಶಿ ಅನುಭವಗಳೊಂದಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು. ಕೇಂದ್ರದ ಅಧ್ಯಕ್ಷರು ಹಾಗೂ ಶಿಬಿರದ ಪ್ರಾಯೊಜಕ ಸಿ. ಎ. ನಂದಗೋಪಾಲ್ ಶೆಣೈ ಅತಿಥಿಗಳನ್ನು ಸ್ವಾಗತಿಸಿದರು. ಉಪಾಧ್ಯಕ್ಷ ರಮೇಶ್ ಡಿ ನಾಯಕ್, ಕಾರ್ಯದರ್ಶಿ ಡಾ ಕೆ ಮೋಹನ ಪೈ, ಕೋಶಾಧಿಕಾರಿ ಬಿ. ಆರ್ ಭಟ್, ಸಿಎಒ ಡಾ. ಬಿ. ದೇವದಾಸ ಪೈ ಉಪಸ್ಥಿತರಿದ್ದರು. ಗೀತಾ ಸಿ ಕಿಣಿ ಹಾಗೂ ಸುಮನಾ ಶೆಣೈಇವರು ಯುವಜನರಲ್ಲಿ ಕೊರತೆಯೆನಿಸುವ ಸರಳ ಅಡುಗೆಯ ಮಾಹಿತಿ ನೀಡಿದರು. ಸುಮತಿ ಪೈ ತೋನ್ಸೆ ಹಾಗೂ ಕುಡ್ಪಿ ವಿದ್ಯಾ ಶೆಣೈ ಇವರು ಜೀವನ ಕೌಶಲ್ಯದ ತರಬೇತಿ ಚಟುವಟಿಕೆ ನೀಡಿದರು. ಹಿರಿಯ ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ ಇವರು ಭಗವದ್ಗೀತೆಯಲ್ಲಿನ ಸಂದೇಶಗಳನ್ನು ಮನೋಜ್ಞವಾಗಿ ವಿವರಿಸಿದರು.
ಶಿಬಿರದಲ್ಲಿ ಕಾಸರಗೋಡು ಚಿನ್ನ ಇವರು ರಂಗಭೂಮಿ ಪ್ರಾತ್ಯಕ್ಷಿಕೆ, ಯೋಗಗುರು ಶ್ರೀ ಗೋಪಾಲಕೃಷ್ಣ ಭಟ್ ದೇಲಂಪಾಡೀ ಯೋಗ ತರಬೇತಿ, ಕಾರ್ಕಳ ವಾತ್ಸಲ್ಯ ಧಾಮ ಟ್ರಸ್ಟಿಗಳಾದ ಸಂದೀಪ ಕುಂದರ, ಸಿ ಡಿ ಕಾಮತ್, ಎಮ್ ಆರ್ ನಾಯಕ, ಇವರುಗಳೊಂದಿಗೆ ಸಂವಾದ, ಶಿವಪ್ರಸಾದ ಇವರಿಂದ ಕರಾಟೆ ತರಬೇತು, ವತಿಕಾ ಪೈ, ಡಾ ರಾಜಶ್ರೀ ಕಿಣಿ, ಸಿಎ ಆದ್ಯಾ ಭಟ್ ಇವರುಗಳಿಂದ - ವೈವಾಹಿಕ ಜೀವನದಲ್ಲಿ ಉದ್ಯೊಗ ಹಾಗೂ ಮನೆವಾರ್ತೆ ಸಮತೋಲನ- ಈ ಬಗ್ಗೆ ವಿಚಾರ ಮಂಡನೆ್, ತ್ರಿಶಾ ಸಂಸ್ಥೆ ಸ್ಥಾಪಕ ಸಿಎ ಗೋಪಾಲಕೃಷ್ಣ್ ಭಟ್ ಇವರಿಂದ - ಗುರಿನಿರ್ದೇಶಿತ ಪ್ರಯತ್ನ- ಈ ಬಗ್ಗೆ ಉಪನ್ಯಾಸ ನಡೆಯಲಿದೆ.
ಗೋವಾದ ಬಾಲಾಜಿ ಶೆಣೈ - ಗೋವಾ ದೇವಸ್ಥಾನಗಳಲ್ಲಿ ಅಧ್ಯಯನದ ಅವಕಾಶಗಳು, ಪ್ರೊ. ರವೀಂದ್ರ ಶೆಣೈ - ಭವಿಷ್ಯದ ಮುನ್ನಡೆಗೆ ಸಂಸೃತಿಯ ಪಾತ್ರ, ಡಾ ಕಸ್ತೂರಿ ಮೋಹನ ಪೈ- ಕೊಂಕಣಿ ಭಾಷಾ ವಿಚಾರ, ಸಮರ್ಥ ಶೆಣೈ -ಕಲಿಕೆ ಮತ್ತು ಹವ್ಯಾಸಗಳನ್ನು ಒಟ್ಟಾಗಿ ನಿಭಾಹಿಸುವ ಬಗ್ಗೆ ಮಾತನಾಡುವರು. ಕ್ಯಾಲಿಫೋರ್ನಿಯಾದ ಯುವ ಉದ್ಯಮಿ ಸುಶೀಲ್ ಪಡಿಯಾರ ಇವರು ಶಿಬಿರಾರ್ಥಿಗಳೊಂದಿಗೆ ಆನ್ ಲೈನ್ ಮೂಲಕ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಗೋವಾದ ಮನೋಜ ಕಾಮತ ರವರು ರಚಿಸಿದ “ವಿಚಾರ್ ವಲಯ್” ಕೊಂಕಣಿ ಕವಿತಾ ಪುಸ್ತಕ ಬಿಡುಗಡೆಗೊಂಡಿತು. ಕೇಂದ್ರ ಸಾಹಿತ್ಯ ಆಕಾಡೆಮಿಯ ಮೆಲ್ವಿನ್ ರೊಡ್ರಿಗ್ಸ್ , ಹೆಚ್ ಎಮ್ ಪೆರ್ನಾಳ್, ಗೋವಾದ ವಿಶಾಲ್ ಶೆಣೈ ಭಾಗವಹಿಸಿದ್ದರು.