ಉಡುಪಿ, ಮೇ 23: ಪ್ರಸಕ್ತ ಸಾಲಿನ ಮುಂಗಾರು ಮಳೆ ಪ್ರಾರಂಭವಾಗಲಿರುವುದರಿಂದ. ಸಾರ್ವಜನಿಕರು ಹಾಗೂ ಇತರ ಇಲಾಖೆಗಳಿಂದ ನಗರಸಭೆಯ ರಸ್ತೆಯನ್ನು ಅಗೆಯುತ್ತಿರುವುದರಿಂದ ರಸ್ತೆ ದುರಸ್ಥಿಪಡಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಜೂನ್ 01 ರಿಂದ ಸೆಪ್ಟೆಂಬರ್ 31 ರ ವರೆಗೆ ರಸ್ತೆ ಅಗೆತ (ಕಟ್ಟಿಂಗ್) ಮಾಡದೇ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
