ಬೆಂಗಳೂರು: ಡಿ.ಕೆ ಲೇನ್ ಚಿಕ್ಕ ಪೇಟೆ ಭಗವಾನ್ 1008 ಶ್ರೀ ಮಹಾ ವೀರ ಸ್ವಾಮಿ ಜಿನ ಮಂದಿರದಲ್ಲಿ ಶಾಂತಿ ಚಕ್ರ ವಿಧಾನವು ಇಂದು ಯುಗಳಮುನಿ 108 ಅಮೋಘ ಕೀರ್ತಿ 108 ಅಮರ ಕೀರ್ತಿ ಮುನಿರಾಜರ ಪಾವನ ಸಾನ್ನಿಧ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಪಾವನ ಉಪಸ್ಥಿತಿಯಲ್ಲಿ ಇಂದು 02.06.2023 ಅಪರಾಹ್ನ 2.00 ರಿಂದ ಅತ್ಯಂತ ಶ್ರದ್ದಾ ಭಕ್ತಿಯಿಂದ ಜರುಗಿತು.
ಆಶೀರ್ವಾದ ನೀಡಿದ ಯುಗಳ ಮುನಿಗಳು ಧರ್ಮದಿಂದ ಎಲ್ಲಾ ಸುಖ ಭೋಗಗಳು ಪ್ರಾಪ್ತಿಯಾಗುತ್ತದೆ ಇಂದ್ರ ಚಕ್ರವರ್ತಿ ಪದವಿ ಧರ್ಮದಿಂದ ಮಾತ್ರ ದೊರಕುದು ನಿತ್ಯ ದೇವರ ದರ್ಶನ ಮಾಡುದರಿಂದ ಧರ್ಮ ಶ್ರದ್ದೆ ಉಂಟಾಗುತ್ತದೆ ಎಂದರು ಮೂಡುಬಿದಿರೆ ಸ್ವಾಮೀಜಿ ಧರ್ಮ ಲಾಭದಲ್ಲಿ ಇರುವಷ್ಟು ಸಂತೋಷ ಯಾವುದರಿಂದಲೊ ದೊರೆಯದು ಮುನಿ ವರ್ಯರ ಸಸ್ಸoಗ ದೇವ ದರ್ಶನ, ಸ್ವಾಧ್ಯಯ ತಪಸ್ಸು,ಶಾಂತಿ ಧರ್ಮ ಕ್ಷೇತ್ರ ಗಳಿಂದ ಸಿಗುದು ಎಂದು ನುಡಿದರು. ಬಳಿಕ ಭಗ ವಾನ್ 1008 ಶ್ರೀ ಶಾಂತಿನಾಥ ಸ್ವಾಮಿ, ಶ್ರೀ 1008 ಮಹಾ ವೀರ ಸ್ವಾಮಿ ಮಹಾ ಅರ್ಘ್ಯ ಮಹಾ ಮಂಗಳ ಆರತಿ ಯುಗಳ ಮುನಿ ವರ್ಯರ ಹಾಗೂ ಭಟ್ಟಾರಕರ ಪಾದ ಪೂಜೆ ಬಸದಿ ಅಧ್ಯಕ್ಷ ರಾದ ವಕೀಲ್ ಪ್ರಕಾಶ್, ಅಶೋಕ್ ಮೋಹನ್,ಪದಾಧಿಕಾರಿಗಳು ಶರತ್ ಜೈನ್ ಪಚ್ಚೇಶ್ ಇಂದ್ರ ನೆರವೇರಿಸಿದರು.