ಮಂಗಳೂರು: ದಾವಣಗೆರೆಯ ಎಸ್ಪಿ ಆಗಿದ್ದು, ಚುನಾವಣಾ ಕಾಲದಲ್ಲಿ ಡಿಜಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ ಸಿ. ಬಿ.ರಿಷ್ಯಂತ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬದಲಿ ಎಸ್ಪಿಯಾಗಿ ನಿಯೋಜಿಸಲಾಗಿದೆ.
ಇಲ್ಲಿನ ಎಸ್ಪಿ ವಿಕ್ರಮ್ ಆಮ್ಟೆಯವರು ಸದ್ಯ ಸಿಕ್ ಲೀವ್ನಲ್ಲಿ ಇದ್ದಾರೆ. ರಿಷ್ಯಂತ್ ಅವರು 2013ನೇ ಸಾಲಿನ ಐಪಿಎಸ್ ಅಧಿಕಾರಿ ಆಗಿದ್ದು ಹಿಂದೆ ಮಂಗಳೂರು ಸಹಿತ ಹಲವು ಕಡೆ ಡಿಎಸ್ಪಿ ಮೊದಲಾದ ಹುದ್ದೆ ನಿರ್ವಹಿಸಿದ್ದರು.