ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಸೋಮನಾಥೇಶ್ವರ ದೇವಾಲಯದ ಬಳಿ ಚಿಟ್ಟೆಮಾರ್ ಎಂಬಲ್ಲಿ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ವೃಂದಾವನ ಪ್ರತಿಷ್ಠಾ ಮಹೋತ್ಸವ ಮೇ 26 ರಿಂದ 30 ರ ತನಕ ನಡೆಯಲಿದೆ. ಮೇ 29 ರಂದು ನೂತನ ಶ್ರೀರಾಮ ದೇವರ, ಗುರು ರಾಘವೇಂದ್ರರ ವೃಂದಾವನ ಪ್ರತಿಷ್ಠೆ ಪೇಜಾವರ ಮಠಾಧೀಶರಿಂದ ನಡೆಯಲಿದೆ. ಕುಡುಪು ಕೃಷ್ಣರಾಜ ತಂತ್ರಿ ನೇತೃತ್ವ ವಹಿಸಲಿದ್ದಾರೆ.
ಗುರುರಾಯರ ಭಕ್ತ ಅಮೇರಿಕಾದ ಹೋಟೆಲ್ ಉದ್ಯಮಿ ಕಿಶೋರ್ ಕೋಟ್ಯಾನ್ ಕುಟುಂಬ 85 ಸೆಂಟ್ಸ್ ಜಾಗದಲ್ಲಿ ಕಾಷ್ಠ ಶಿಲ್ಪದ ಶಿಲಾಮಯ ಮಂದಿರ ಕಟ್ಟಿಸಿದ್ದಾರೆ. ಈ ದೇವಾಲಯ ಸದಾ ಭಜನೆ, ಸಂಸ್ಕಾರಯುತ ಕಾರ್ಯಕ್ರಮಗಳಿಗೆ ಕೇಂದ್ರವಾಗಲಿದೆ. ಸಭಾ ಕಾರ್ಯಕ್ರಮ ರಹಿತ ಕಾರ್ಯಕ್ರಮದಲ್ಲಿ ಪ್ರತೀ ದಿನ ಸ್ಥಳೀಯರಿಂದ ಭಜನೆ, ಮೇ 28 ರಂದು ಸಂಜೆ ಭ್ರಾಮರಿ ನೃತ್ಯದ ನಿರ್ದೇಶಕಿ ವಿದುಷಿ ತೀರ್ಥ ಕಟೀಲುರ ನೃತ್ಯಾಂಜಲಿ, ಮೇ 29 ರಂದು ಸಂಜೆ ಹರಿದ್ವಾರ ದೇವಕಿ ತನಯ ಕೂಡ್ಲುರ ರಾಘವೇಂದ್ರ ಸ್ವಾಮಿ ಮಹಾತ್ಮೆ ಹರಿಕಥೆ ಜರುಗಲಿದೆ. ಮೇ 30 ರಂದು ನೃತ್ಯ ಭಜನಾ ಅಂತಿಮ ಸ್ಪರ್ಧೆಯಲ್ಲಿ 21 ತಂಡಗಳು ಭಾಗವಹಿಸಲಿವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಮಂದಿರದ ಮಾರ್ಗದರ್ಶಕರಾದ ಶ್ರೀಪತಿ ಭಟ್, ಕದ್ರಿ ನವನೀತ ಶೆಟ್ಟಿ, ಪ್ರಕಾಶ್ ಮೂಡುಬಿದಿರೆ, ರವೀಂದ್ರ ಅಂಚನ್, ಲೀಲಾಕ್ಷ ಕರ್ಕೇರಾ, ತಿಳಿಸಿದರು.