ಮೂಡುಬಿದಿರೆ: ಮಂಗಳೂರಿನ ಸೈಂಟ್ ತೆರೇಸಾ ಶಾಲೆಯಲ್ಲಿ ಐಸಿಎಸ್ಇ ಮತ್ತು ಸಿಬಿಎಸ್ಇ ಶಾಲೆಗಳ ಸಂಘ (ಐಕ್ಸ್) ನಡೆಸಿದ ದಕ್ಷಿಣ ಕನ್ನಡ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆ-ತೇಜಸ್ 2025ನಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆ ಸಮಗ್ರ ಚಾಂಪಿಯನ್ಶಿಫ್ ಪಡೆದುಕೊಂಡಿತು.
‘ಬದುಕಿನ ವರ್ಣಪಟಲ’ ಎಂಬ ಮುಖ್ಯ ಥೀಮ್ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯ ಒಟ್ಟು 31 ಶಾಲೆಗಳು ಭಾಗವಹಿಸಿದ್ದವು. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.