ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಆಯ್ಕೆಯಾದರು.

ಚಲಾವಣೆ ಆದ 6,011 ಮತಗಳಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ 3,762, ಮಂಜುನಾಥ ಭಂಡಾರಿ ಅವರಿಗೆ 2,079 ಮತಗಳು ಬಂದಿವೆ. 

ಎಸ್‌ಡಿಪಿಐನ ಶಾಫಿ ಕೆ ಅವರು 204 ಮತಗಳನ್ನು ಪಡೆದರು. 56 ಮತಗಳು ಅಸಿಂಧು ಆದವು. 

ಶ್ರೀನಿವಾಸ ಪೂಜಾರಿ ಅವರು‌ ನಾಲ್ಕನೆಯ ಬಾರಿ, ಭಂಡಾರಿ ಮೊದಲ ಬಾರಿಗೆ ಪರಿಷತ್ ಪ್ರವೇಶಿಸುತ್ತಿದ್ದಾರೆ.