ಮಂಗಳೂರು: ಕೆ.ಎಸ್.ಆರ್.ಟಿ.ಸಿ  ಮಂಗಳೂರು ಬಸ್ಸು ನಿಲ್ದಾಣದ ಶೌಚಾಲಯದ ಕಟ್ಟಡದ ನವೀಕರಣ ಕಾಮಗಾರಿಯನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (ಎಂ.ಆರ್.ಪಿ.ಎಲ್) ಇವರ 2023-24 ನೇ ಸಾಲಿನ ಸಿ.ಎಸ್.ಆರ್ ಅನುದಾನದಡಿಯಲ್ಲಿ ಒಟ್ಟು ರೂ. 40 ಲಕ್ಷಗಳ ಕಾರ್ಯ ಯೋಜನೆಯಡಿಯಲ್ಲಿ ಸಂಪೂರ್ಣಗೊಳಿಸಲಾಗಿದ್ದು, ಗುರುವಾರ ಈ ನವೀಕೃತ ಕಟ್ಟಡವನ್ನು ಕಾರ್ಯಾರಂಭಗೊಳಿಸಲಾಯಿತು.

ಕಾರ್ಯಕ್ರಮವನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್‍ನ ಮುಖ್ಯ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್‍ ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಮಂಗಳೂರು ಕೆ. ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ,ವಿಭಾಗೀಯ ಸಂಚಲನಾಧಿಕಾರಿ ಹೆಚ್.ಆರ್.ಕಮಲ್ ಕುಮಾರ್,  ಲೆಕ್ಕಾಧಿಕಾರಿ ಹರೀಶ್ ಕೊಠಾರಿ,ವಿಭಾಗೀಯ ಯಾಂತ್ರಿಕ ಅಭಿಯಂತರ ವಿನಯ್, ಮತ್ತು ಸಹಾಯಕ ಅಭಿಯಂತರರಾದ ಹರೀಶ್ ಯು.ಎನ್‍ ಶರತ್ ಕುಮಾರ್ ಎನ್, ಹಾಗೂ ಎಮ್‍ಆರ್‍ಪಿಎಲ್  ಇಂಜಿನಿಯರ್ ಹರೀಶ್‍ರಾವ್ ಉಪಸ್ಥಿತರಿದ್ದರು.