ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ 17ನೇ ವರ್ಷದ ಜಪ್ಪಿನಮೊಗರು ಗಣೇಶೋತ್ಸವ ಆಮಂತ್ರಣ ಪತ್ರಿಕೆಯು ಆಗಸ್ಟ್ 01 ರಂದು ಶುಕ್ರವಾರ ಸಂಜೆ ಗಂಟೆ 6:30 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಮಂದಿರ (ರಿ) ಸಭಾಂಗಣ ಜಪ್ಪಿನಮೊಗರು ಇಲ್ಲಿ ಜಯಶೀಲಾ ಅಡ್ಯಂತಾಯ ಸಭಾಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ವಿನೂತನ ಶೈಲಿಯಲ್ಲಿ ದೇವರ ರಥದಲ್ಲಿ ಆಮಂತ್ರಣ ಪತ್ರವನ್ನು ತಂದು ಅಂಬಿಕಾ ಸುನಿಲ್ ಮತ್ತು ಸುನಿಲ್ ಕುಮಾರ್ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಮಾಜಿ ಕಾರ್ಫೋರೇಟರ್ ಅಧ್ಯಕ್ಷರು ಜೆ. ನಾಗೇಂದ್ರ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಸವಾಗತಿಸಿದರು. ಸುಧಾಕರ್ ಜೆ. ಧನ್ಯವಾದವಿತ್ತರು. ಹರೀಶ್ ತಾರ್ದೋಲ್ಯ ಮತ್ತು ಕವಿತಾ ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.
ಸುಭಾಷ್ ವಿ. ಅಡಪ, ಬಾಲಕೃಷ್ಣ ಶೆಟ್ಟಿ, ಪ್ರವೀಣ್ ತಂದೊಳಿಗೆ ಶಕೀಲಾ ಶೆಟ್ಟಿ ಮಾ| ಸುಧಾಂಶು ವಿ. ಶೆಟ್ಟಿ, ಮಾ| ಕವೀಶ್ ಮತ್ತಿತರು ಉಪಸ್ಥಿತರಿದ್ದರು.