ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಜೊಕಿಮ್ ಸ್ಟ್ಯಾನಿ ಅಲ್ವಾರಿಸ್, ಸದಸ್ಯರಾದ ದಯಾನಂದ ಮಢ್ಕೇಕರ್ ಹಾಗೂ ನವೀನ್ ಲೋಬೊರವರು ಇತ್ತೀಚೆಗೆ ಕಾರ್ಕಳದ ನಕ್ರೆ ಪರಿಸರದ ಹಿರಿಯ ಕೊಂಕಣಿ ಸಾಹಿತಿಗಳನ್ನು ಅವರ ಮನೆಯಲ್ಲಿ ಭೇಟಿಯಾಗಿ ಅಕಾಡೆಮಿಯ ಕಾರ್ಯಕ್ರಮಗಳ ಕುರಿತು ಅವರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅಕಾಡೆಮಿಯು ಮುಂದೆ ಯೋಜಿಸಬಹುದಾದ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ನಡೆಸಿ ಮಾರ್ಗದರ್ಶನ ಪಡೆಯಲಾಯ್ತು. ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಹೆಸರಾಂತ ಹಿರಿಯ ಸಾಹಿತಿ ಜೋರ್ಜ್ ಕಾಸ್ತೆಲಿನೋ, ಹಿರಿಯ ಬರಹಗಾರ ಲಿಗೋರಿ ನಕ್ರೆ (ಪ್ರೊ ಲಿಗೋರಿ ಮೆಂಡೊನ್ಸಾ) ಅವರನ್ನು ಈ ಸಂದರ್ಭದಲ್ಲಿ ಭೇಟಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಕಳ ಪ್ರದೇಶದಲ್ಲಿ ಸದ್ದ್ಯದಲ್ಲಿ ಅಕಾಡೆಮಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ನಕ್ರೆ ಚರ್ಚಿನ ಗುರುಗಳನ್ನು ಹಾಗೂ ಲಕ್ಷ್ಮಿಪುರ ಹಿರ್ಗಾನದ ಅಧಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಪ್ರಮುಖರನ್ನು ಭೇಟಿಯಾಗಿ ವಿಚಾರ ವಿನಿಮಯ ನಡೆಸಿದರು.