ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಮಳೆ, ಅನೇಕ ಕಡೆಗಳಲ್ಲಿ  ಗುಡ್ಡ ಕುಸಿತ ಮಂಗಳೂರಿನ ಉಳ್ಳಾಲದಲ್ಲಿ ಸಾವು ಸಂಭವಿಸಿದ್ದು  ಅಧಿಕಾರಿಗಳ ಜೊತೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಸ್ಥಳಕ್ಕೆ ಭೇಟಿ ಮತ್ತು ತಕ್ಷಣ ಕಾರ್ಯಪೃವತ್ತರಾಗಿ ಗುಡ್ಡಕುಸಿತ ತಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ.

ದ.ಕ ಜಿಲ್ಲೆಯ  ತಾಲೂಕಿನಲ್ಲಿ ಹಲವಾರು ಕಡೆ ಗುಡ್ಡ ಕುಸಿತಗೊಂಡು ಅನೇಕ ಸಾವು ನೋವು ಸಂಬವಿಸಿದ್ದು, ಅನೇಕ ಮನೆಗಳಿಗೆ ನೀರು ನುಗ್ಗಿ ಮನೆಯ ಸೊತ್ತುಗಳು ನಾಶಗೊಂಡಿದ್ದು, ಮಂಗಳೂರಿನ ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಮಂಜನಾಡಿ ಮೊಂಟೆಪದವು ಎಂಬಲ್ಲಿ ತೀವ್ರ ಗುಡ್ಡ ಕುಸಿತ ಉಂಟಾಗಿದ್ದು, ಮನೆಯ ಮೇಲೆ ಗುಡ್ಡಗಳು ಕುಸಿದುಮನೆಯೊಳಗಿದ್ದ ಮಗುವನ್ನು ರಕ್ಷಿಸಲು ಎಸ್.ಡಿಎಫ್, ಎಸ್.ಡಿ.ಎಫ್  ಮತ್ತು ಇತರ ದಳಗಳು ತೀವ್ರವಾಗಿ ಸೆಣಸಾಡಿ ಜೀವವನ್ನು ಉಳಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಊರಿನ ಎಲ್ಲಾ ಜನರ ಸಹಾಯ ಹಸ್ತದೊಂದಿಗೆ ಅಧಿಕಾರಿ ವರ್ಗದವರೆಲ್ಲರೂ ಒಟ್ಟಾಗಿ ತೀವ್ರ ಕಾರ್ಯಾಚರಣೆ ನಡೆಸಿ ಮನೆಗಳಿಗೆ ಮತ್ತು ಜನರಿಗೆ ರಕ್ಷಣೆ ಮಾಡಲು ಸಾಧ್ಯವಾಗಿದೆ ಎಂದು ಐವನ್ ಡಿʼಸೋಜಅ ತಿಳಿಸಿದರು.

ಇಂದು ಬೆಳಿಗ್ಗೆ ಮಂಜನಾಡಿಯ ಮೊಂಟೆಪದವು ಪ್ರದೇಶಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಯಾವುದೇ ಜೀವ ಹಾನಿಯಾಗದ ಹಾಗೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸಲಹೆ ಸೂಚನೆಯನ್ನು ನೀಡಿದರು. ಅಲ್ಲದೇ ದ.ಕ. ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ ಹಾನಿ ಉಂಟಾಗಿದ್ದು,  ಕನ್ನಗುಡ್ಡೆ, ಮಂಗಳಾದೇವಿ, ಶಿವ ನಗರ ಈ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಪಾಯದ ಸ್ಥಿತಿಯಲ್ಲಿರುವ ಮನೆ ಮಂದಿಗೆ ಪುನರ್ವಸತಿ ಒದಗಿಸಿಕೊಡಬೇಕು ತುರ್ತು ಪರಿಸ್ಥಿತಿ ಇದ್ದಲ್ಲಿ ಜನರನ್ನು ದೋಣಿಗಳನ್ನು ಇಟ್ಟು ಬೇರೆಕಡೆ ವರ್ಗಾಯಿಸಬೇಕು  ಎಂದು ಮಂಗಳೂರು ಮಹಾನಗರ ಪಾಲಿಕೆ ಕಮೀಷನರ್     ಶ್ರೀ ರವಿಚಂದ್ರ ನಾಯಕ್ ರವರಿಗೆ ಮಾತನಾಡಿ ತಿಳಿಸಿದರು ಪ್ರಾಣಹಾನಿ, ಮನೆ ಹಾನಿ ಯಾದವರಿಗೆ ಕೂಡಲೇ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಲಾಯ್ತು. ಪ್ರಕೃತಿ ವಿಕೋಪದಡಿ ತೊಂದರೆಯಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ  ಸರಕಾರದಿಂದ ವೆಚ್ಚವನ್ನು ಭರಿಸಬೇಕು. ಹಾಗೂ ಮಳೆ ಹಾನಿಯಲ್ಲಿ ಯಾರು-ಯಾರು ಪ್ರಾಣ ಕಳೆದುಕೊಂಡಿದ್ದರೋ ಅವರಿಗೆ ಕೂಡಲೇ ಪರಿಹಾವನ್ನು ಒದಗಿಸಿಕೊಡಬೇಕೆಂದು ಸರಕಾರವನ್ನು ಐವನ್ ಡಿʼಸೋಜಾ ಒತ್ತಾಯಿಸಿದ್ದಾರೆ.