ಪುತ್ತೂರು: ಮೆಸ್ಕಾಂ ಪುತ್ತೂರು ಉಪ ವಿಭಾಗದ ಕಡಬ ತಾಲೂಕಿನಲ್ಲಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುವ ವೇಳೆ ಬಾಗಲಕೋಟೆ ಮೂಲದ ಸ್ಥಳೀಯ ಲೈನ್‌ಮ್ಯಾನ್ ದ್ಯಾಮಣ್ಣ ದೊಡ್ಮನಿ ಆಕಸ್ಮಿಕ ದುರಂತ ಸಾವು ಕಂಡಿದ್ದಾರೆ.

ಕುಟ್ರುಪಾಡಿ ಮುಳಿ‌ಮಜಲು ಎಂಬಲ್ಲಿ ಈ ಅವಘಡ ನಡೆದಿದೆ. ಕಂಬದಲ್ಲಿ ನೇತಾಡುವ ದ್ಯಾಮಪ್ಪನನ್ನು ಗಮನಿಸಿ ಕೆಲವರು ಕೆಳಗಿಳಿಸಿ ಪುತ್ತೂರು ಆಸ್ಪತ್ರೆಗೆ ಸಾಗಿಸಿದರು. ಆದರೆ ದ್ಯಾಮಪ್ಪ ಮೊದಲೇ ಸಾವಿಗೀಡಾಗಿದ್ದರು. ಶವವನ್ನು ಬಾಗಲಕೋಟೆ ಜಿಲ್ಲೆಗೆ ಸಾಗಿಸಲು ಮೇ 2ರ ಇಂದು ಏರ್ಪಾಡು ಮಾಡಲಾಗಿದೆ.