ಮೂಡುಬಿದಿರೆ:- ಭಾಗವಾನ್ ಶ್ರೀ 1008 ವಾಸುಪೂಜ್ಯ ಸ್ವಾಮಿ ಗರ್ಭ ಕಲ್ಯಾಣ ನಿಮಿತ್ತ ಈ ದಿನ ಆಷಾಢ ಮಾಸ ಷಷ್ಠಿ ಉತ್ತರಾ ನಕ್ಷತ್ರ ಇರುವ 11-7-2020 ರಂದು ಶನಿವಾರ ಬೆಳಿಗ್ಗೆ 7.25ಕ್ಕೆ ಕೆರೆ ಬಸದಿ ಭಗವಾನ್ 1008ಮಲ್ಲಿನಾಥ ಸ್ವಾಮಿ ಚತುರ್ವಿಂಶತಿ ತೀರ್ಥಂಕರ ರ ಪೂಜೆ ಅಷ್ಟವಿಧಾರ್ಚನೆ ,ಕ್ಷೀರಾಭಿಶೇಕ ಕ್ಷೇತ್ರ ಪಾಲ ಪೂಜೆ, ನಾಗ ದೇವರ ಪೂಜೆ, ಗ್ರಹ ಪೂಜೆ ದಿಕ್ಪಾಲ ಪೂಜೆ ಪವಿತ್ರ ಜಲ ಪೂಜೆ ಯೊಂದಿಗೆ ಕೆರೆ ಯಲ್ಲಿ ಮೂಡುಬಿದಿರೆ ಜೈನಕಾಶಿ ಶ್ರೀ ಜೈನ ಮಠಾದೀಶ ರಾದ ಪರಮ ಪೂಜ್ಯ ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಬಸದಿಕೆರೆ ಯಲ್ಲಿ ಅರ್ಘ್ಯ, ಬಾಗಿನ ಸಮರ್ಪಿಸಿದರು ಹಾಗೂ ಲೋಕ ಕಲ್ಯಾಣ ಕ್ಕಾಗಿ ಪ್ರಾರ್ಥಿಸಿದರು ಶ್ರೀ ಗಳ ಮಾರ್ಗದರ್ಶನ ದಲ್ಲಿ ಜರುಗಿದ ಪಾರಂಪರಿಕ ಪೂಜೆ ಪುರೋಹಿತ ಸುವಿದಿ ಇಂದ್ರ ರು ನೆರವೇರಿಸಿ ದರು ಪೂಜಾ ಕಾರ್ಯ ಕ್ರಮ ದಲ್ಲಿ ಪಟ್ಣ ಶೆಟ್ಟಿ ಸುಧೇಶ್ ಕುಮಾರ್, ಬೆಟ್ಕೇರಿ ದಿನೇಶ್ ಕುಮಾರ್ ಮುಕ್ತೇಸರ ರು ಹಾಗೂ ಹರಿಶ್ಚಂದ್ರ, ವಿನಯಚಂದ್ರ, ಜ್ಞಾನಚಂದ್ರ,ಅಧ್ಯಾಪಕ ಸುಧಾಕರ್, ಶ್ವೇತಾ ಪ್ರವೀಣ್ ಪುರಸಭೆ ಸದಸ್ಯೆ, ಮೊದಲಾದವರು ಉಪಸ್ಥಿತರಿದ್ದರು.